ಕಿರುತೆರೆ

ಆಸ್ಪತ್ರೆಯಿಂದ ಬಿಗ್ ಬಾಸ್ ಮನೆಗೆ ಮರಳಿ ಬಂದ ಸಂಗೀತಾ, ‘ಡ್ರೋನ್’ ಪ್ರತಾಪ್

ಟಾಸ್ಕ್‌ವೊಂದರಲ್ಲಿ ಸಮಸ್ಯೆ ಆದ ಕಾರಣ ಡ್ರೋನ್ ಪ್ರತಾಪ್, ಸಂಗೀತಾ ಅವರು ಬಿಗ್ ಬಾಸ್ ಮನೆಯಿಂದ ಆಸ್ಪತ್ರೆ ಸೇರಿದ್ದರು. ಎರಡು ದಿನವಾದರೂ ಅವರು ಬಿಗ್ ಬಾಸ್ ಮನೆಗೆ ಬಂದಿರಲಿಲ್ಲ. ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‌ಗೆ ಇವರಿಬ್ಬರು ಬರುತ್ತಾರಾ? ಇಲ್ಲವಾ? ಎಂಬ ಪ್ರಶ್ನೆ ಎದುರಾಗಿತ್ತು. ಈಗ ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ಅದರಲ್ಲಿ ಪ್ರತಾಪ್, ಸಂಗೀತಾ ಮರಳಿ ಮನೆಗೆ ಬಂದಿರೋದು ರಿವೀಲ್ ಆಗಿದೆ.

Advertisement
Advertisement
Advertisement

ಚೇರ್ ಆಫ್ ಥಾರ್ನ್ಸ್’ ಟಾಸ್ಕ್ ಪ್ರಕಾರ ಕುರ್ಚಿ ಮೇಲೆ ಕುಳಿತ ನಾಲ್ವರು ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ಆಗ ವಿನಯ್ ತಂಡದವರು ರಾಕ್ಷಸರಾಗಿದ್ದರೆ, ಸಂಗೀತಾ ತಂಡದವರು ಗಂಧರ್ವರಾಗಿದ್ದರು. ಆದಷ್ಟು ಬೇಗ ಕುರ್ಚಿ ಮೇಲಿದ್ದವರನ್ನು ಎಬ್ಬಿಸಬೇಕು ಅಂತ ವಿನಯ್ ಗೌಡ, ಮೈಕಲ್, ವರ್ತೂರು ಸಂತೋಷ್ ಅವರು ಸೋಪಿನ ನೀರನ್ನು ಸ್ವಲ್ಪವೂ ಗ್ಯಾಪ್ ಕೊಡದೆ ಬೀಸಿ ಬೀಸಿ ಹೊಡೆದಿತ್ತು. ಸಂಗೀತಾ ಅವರು ಆರಂಭದಲ್ಲಿ ಕೂಗಿದರು, ಆದರೂ ಯಾರೂ ಸುಮ್ಮನೆ ಇರಲಿಲ್ಲ, ಕೊನೆಗೂ ಸಂಗೀತಾ ಅವರು ಕುರ್ಚಿಯಿಂದ ಎದ್ದರು. ಪ್ರತಾಪ್ ಅವರಿಗೆ ಮತ್ತೆ ನೀರು ಬೀಸಿ ಬೀಸಿ ಹೊಡೆದಾಗ ಬಿಗ್ ಬಾಸ್ ಟಾಸ್ಕ್‌ನ್ನು ರದ್ದು ಮಾಡಿದರು.

ಮುಖಕ್ಕೆ, ಕಣ್ಣಿಗೆ ಸಿಕ್ಕಾಪಟ್ಟೆ ಸೋಪಿನ ನೀರು ಹೋಗಿತ್ತು. ಹೀಗಾಗಿ ಅವರಿಬ್ಬರನ್ನು ಆಸ್ಪತ್ರೆಗೆ ಕಳಿಸಲಾಗಿತ್ತು. ಎರಡು ದಿನಗಳ ಬಳಿಕ ಅವರು ಬಿಗ್ ಬಾಸ್ ಮನೆಗೆ ಮರಳಿದ್ದಾರೆ.

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago