ಕರಾವಳಿ

ಚಿನ್ನಾಭರಣ ಹಿಂದಿರುಗಿಸದೆ ವಂಚನೆ; ಪ್ರಕರಣ ದಾಖಲು

ಬಂಟ್ವಾಳ: ವಿವಾಹ ನಿಶ್ಚಿತಾರ್ಥದ ಹಿನ್ನೆಲೆ ಕಳೆದ ಎಪ್ರಿಲ್‌ನಲ್ಲಿ ಯುವತಿಯೋರ್ವಳು ತನ್ನನ್ನು ಮದುವೆಯಾಗುವ ಯುವಕನ ಜತೆ ಬಂದು ಸ್ನೇಹಿತೆಯಿಂದ ಚಿನ್ನಾಭರಣ ಪಡೆದುಕೊಂಡು ಹಿಂದಿರುಗಿಸದೆ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement
Advertisement
Advertisement

ಬಿ.ಸಿ. ರೋಡು ನಿವಾಸಿ ಸಂಧ್ಯಾ ವಂಚನೆಗೊಳಗಾದ ಮಹಿಳೆಯಾಗಿದ್ದು, ಆರೋಪಿಗಳಾದ ಅಶ್ವಿ‌ನಿ ಹಾಗೂ ಶ್ರೀಕಾಂತ್‌ ಚಿನ್ನಾಭರಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಳಿಕ ತಮ್ಮ ವಿವಾಹ ನಿಶ್ಚಿತಾರ್ಥಕ್ಕೆ ಚಿನ್ನಾಭರಣ ನೀಡುವಂತೆ ವಿನಂತಿಸಿದ್ದು, ಅದರಂತೆ ಸಂಧ್ಯಾ ಅವರು ತಮ್ಮ ಆಭರಣಗಳನ್ನು ಅಶ್ವಿ‌ನಿಗೆ ನೀಡುವಂತೆ ತಾಯಿಯ ಬಳಿ ಹೇಳಿದ್ದು, ಅವರು ನೀಡಿರುತ್ತಾರೆ.

ಸುಮಾರು 32.70 ಗ್ರಾಂ ತೂಕದ ಚಿನ್ನದ ನಕ್ಲೇಸ್‌, 15.10 ಗ್ರಾಂ ತೂಕದ ಚಿನ್ನದ ಕೈ ಬಳೆ, 2.20 ಗ್ರಾಂ ತೂಕದ ವಜ್ರದ ಒಂದು ಜತೆ ಕಿವಿಯೋಲೆ, 17.20 ಗ್ರಾಂನ ಚಿನ್ನದ ಕೈ ಬಳೆ, ತಲಾ 1 ಪವನ್‌ ತೂಕದ ಚಿನ್ನದ ಬಳೆ, ಚಿನ್ನದ ಪೆಂಡೆಂಟ್‌ ಹಾಗೂ ಚಿನ್ನದ ರಿಂಗ್‌, 19 ಗ್ರಾಂ ತೂಕದ ಚಿನ್ನದ ಸರ ಪಡೆದುಕೊಂಡು ಸಾಕಷ್ಟು ಬಾರಿ ಕೇಳಿದರೂ ಹಿಂದಿರುಗಿಸಿಲ್ಲ. ಆದರೆ ಕಳೆದ ಅ. 26ರಂದು ಆಭರಣಗಳಲ್ಲಿ 17.2 ಗ್ರಾಂನ ಕೈ ಬಳೆ ಹಾಗೂ ತಲಾ ಒಂದು ಪವನ್‌ ತೂಕದ ಚಿನ್ನದ ಪೆಂಡೆಂಟ, ಉಂಗುರವನ್ನು ಮಾತ್ರ ಹಿಂದಿರುಗಿಸಿರುತ್ತಾರೆ. ಪ್ರಸ್ತುತ ಸಂಧ್ಯಾ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago