ಸುಳ್ಯ : ಐಶ್ವರ್ಯಾ ಆತ್ಮಹತ್ಯೆ ಪ್ರಕರಣದಲ್ಲಿ ತಿರುವು -ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿ ಐವರ ಬಂಧನ

By: Ommnews

Date:

Share post:

ಸುಳ್ಯ : ಸುಳ್ಯದ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ತಿರುವೊಂದು ದೊರಕಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ರಾಜೇಶ್‌, ಅತ್ತೆ ಸೀತಾ, ಮಾವ ಗಿರಿಯಪ್ಪ ಗೌಡ ಕಾಪಿಲ, ಮೈದುನ, ಮೈದುನನ ಪತ್ನಿಯನ್ನು ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.

Advertisement
Advertisement
Advertisement

ಐಶ್ವರ್ಯ ಯುಎಸ್‌ಎ ನಲ್ಲಿ ಎಂಬಿಎ ಮಾಡಿದ್ದರು. ಡೈರಿ ರಿಚ್‌ ಐಸ್‌ಕ್ರೀಮ್‌ ಕಂಪನಿಯ ಮಾಲೀಕ ರಾಜೇಶ್‌ ಅವರನ್ನು ಐಶ್ವರ್ಯ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ಈ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಹ್ಮಣ್ಯ ಅವರ ತಂಗಿ ಗಂಡ ರವೀಂದ್ರ ಅವರು ಅಡಿಟರ್‌ ಆಗಿ ಕೆಲಸ ಮಾಡಿಕೊಂಡಿದ್ದರು. ಅವರೇ ಮುಂದೆ ನಿಂತು ಐಶ್ವರ್ಯ ಮತ್ತು ರಾಜೇಶ್‌ ಮದುವೆ ಮಾಡಿಸಿದ್ದರು. ರವೀಂದ್ರ ಮತ್ತು ಸುಬ್ರಹ್ಮಣ್ಯ ಕುಟುಂಬದಲ್ಲಿ ಆಸ್ತಿ ವಿಚಾರದಲ್ಲಿ ಕಲಹ ಇತ್ತು.

ರವೀಂದ್ರ ಕುಟುಂಬ ಐಶ್ವರ್ಯ ಚಾರಿತ್ರ್ಯ ವಧೆಯನ್ನು ಮಾಡತೊಡಗಿದರು. ರಾಜೇಶ್‌ ಕುಟುಂಬಕ್ಕೆ ಇಲ್ಲಸಲ್ಲದನ್ನು ಹೇಳಿಕೊಡೋಕೆ ಶುರು ಮಾಡಿಕೊಂಡಿದ್ದರು. ಇದರಿಂದ ರಾಜೇಶ್‌ ಕುಟುಂಬದ ಸದಸ್ಯರು ಐಶ್ವರ್ಯಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರೆಂದು ವರದಿಯಾಗಿದೆ.

ಅಲ್ಲದೇ ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ್ದಾರೆಂದು ಹೇಳಲಾಗಿದೆ. ಎಷ್ಟೇ ಕಿರುಕುಳ ನೀಡಿದ್ದರೂ ಐಶ್ವರ್ಯ ಗಂಡನಿಗಾಗಿ ಸಹಿಸಿಕೊಂಡಿದ್ದರಂತೆ. ನಂತರ ಈ ಎಲ್ಲಾ ಘಟನೆಯಿಂದ ನೊಂದ ಐಶ್ವರ್ಯ 20 ದಿನಗಳ ಹಿಂದೆ ತವರು ಮನೆ ಸೇರಿದ್ದರು.

ಅ.26 ರಂದು ಮನನೊಂದು ಡೆತ್‌ನೋಟ್‌ ಬರೆದು ಸಾವಿಗೀಡಾಗಿದ್ದಾರೆ. ಈ ಘಟನೆ ಕುರಿತು ಐಶ್ವರ್ಯಾಳ ತಾಯಿ, ರಾಜೇಶ್‌ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ರವೀಂದ್ರ, ಗೀತಾ, ಶಾಲಿನ, ಓಂ ಪ್ರಕಾಶ್‌ ಎಂಬುವವರ ಮೇಲೂ ದೂರು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section