ಪುತ್ತೂರು :ಪುತ್ತೂರು ತಾಲೂಕಿನ ಮುಳುಗು ಸೇತುವೆಗಳಲ್ಲಿ ಒಂದಾದ ಚೆಲ್ಯಡ್ಕ ಮುಳುಗು ಸೇತುವೆಯ ಅಪ್ರೋಚ್ ಸ್ಲ್ಯಾಬ್ ಕುಸಿದು ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಬೇಕಾಗಿರುವುದರಿಂದ ಅ. 27ರಿಂದ ನ. 6ರ ವರೆಗೆ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆ ಸೂಚಿಸಿದೆ.
ಆರ್ಯಾಪು ಗ್ರಾಮದ ಒಳತ್ತಡ್ಕ-ದೇವಸ್ಯದಿಂದ ಬೆಟ್ಟಂಪಾಡಿ-ಪಾಣಾಜೆ ಮೂಲಕ ಕೇರಳ ಪ್ರವೇಶಿಸುವ ವಾಹನಗಳು ಬದಲಿ ರಸ್ತೆಯಾಗಿ ದೇವಸ್ಯ- ಬೈರೋಡಿ-ಕಾಪಿಕಾಡು-ಕೈಕಾರ ಮಾರ್ಗವಾಗಿ ವಾಹನಗಳು ಚಲಿಸುವಂತೆ ಸೂಚನೆ ನೀಡಲಾಗಿದೆ.