ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್​ ಬಳಿ ಬಿಎಂಟಿಸಿ ಬಸ್​ ಹರಿದು ಮೂರು ವರ್ಷದ ಮಗು ಮೃತ

0
107

ಬೆಂಗಳೂರು :ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾಗಿದೆ. ಗಾರೇಪಾಳ್ಯ ಜಂಕ್ಷನ್​ ಬಳಿ ಬಿಎಂಟಿಸಿ ಬಸ್​ ಹರಿದು ಮೂರು ವರ್ಷದ ಅಯಾನ್ ಮೃತಪಟ್ಟಿದ್ದಾನೆ.

ನಿನ್ನೆ , ದೊಡ್ಡಮ್ಮನ ಜೊತೆ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ​ ಬೈಕ್​ನಿಂದ ಕೆಳಗೆ ಬಿದ್ದಿದ್ದ ಅಯಾನ್ ಮೇಲೆ ಬಸ್​ ಹರಿದಿದೆ. ಪರಿಣಾಮ ಆಯಾನ್​ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಬಸ್​ ಮೇಲೆ ಹರಿದಿದ್ದರಿಂದ ಅಯಾನ್​ ತಲೆ ಛಿದ್ರ ಛಿದ್ರವಾಗಿದೆ.

ಈ ಬಗ್ಗೆ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here