ಜಗ್ಗೇಶ್ , ಡಾಲಿ ಧನಂಜಯ್ ಇನ್ನೂ ಹಲವು ಪ್ರಮುಖ ನಟರು ನಟಿಸಿರುವ ‘ತೋತಾಪುರಿ 2’ ಸಿನಿಮಾ ಇಂದು (ಸೆಪ್ಟೆಂಬರ್ 28) ಕ್ಕೆ ಬಿಡುಗಡೆ ಆಗಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ನಿರ್ಮಾಪಕ ಕೆಎ ಸುರೇಶ್ ಖುಷಿ ವ್ಯಕ್ತಪಡಿಸಿದ್ದಾರೆ.
‘ತೋತಾಪುರಿ 2’ ಸಿನಿಮಾದಲ್ಲಿ ಹಾಸ್ಯವಿದೆ, ಭಾವುಕತೆ ಎಲ್ಲವೂ ಇದೆ ಎಲ್ಲವನ್ನೂ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ ಎಂದಿದ್ದಾರೆ. ಕಾವೇರಿಗಾಗಿ ನಾಳೆ (ಸೆಪ್ಟೆಂಬರ್ 29) ಬಂದ್ ನಡೆಯುತ್ತಿದ್ದು, ಚಿತ್ರಮಂದಿರಗಳು ಬಾಗಿಲು ಹಾಕಲಿವೆ. ಆದರೆ ಆ ಬಗ್ಗೆ ತಮಗೆ ಬೇಸರವಿಲ್ಲ ಎಂದಿದ್ದಾರೆ ಸುರೇಶ್.