ದೇಶ

14 ಲಕ್ಷ ಮೌಲ್ಯದ ಡ್ರಗ್ಸ್ ಪ್ರಕರಣ: ವರಲಕ್ಷ್ಮಿ ಟಿಫನ್ಸ್ ಮಾಲಿಕ ಸೇರಿ ಮೂವರ ಬಂಧನ

ಹೈದರಾಬಾದ್: ಆಂಧ್ರಪ್ರದೇಶದ ಖ್ಯಾತ ವರಲಕ್ಷ್ಮಿ ಟಿಫನ್ಸ್ ನ ಮಾಲಿಕ ಪ್ರಭಾಕರ್ ರೆಡ್ದಿ ಹಾಗೂ ಅವರ ಸಹಾಯಕ ವೆಂಕಟ ಶಿವ ಸಾಯಿ ಕುಮಾರ್ (ಪಲ್ಲೇತುರು ಪುಲ್ಲಟ್ಲು ಮಾಲಿಕ) ಹಾಗೂ ಗ್ರಾಹಕ-ಪೆಡ್ಲರ್ ನ್ನು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ. 

Advertisement
Advertisement
Advertisement

ಡ್ರಗ್ಸ್

ಕೊಕೆನ್, ಎಂಡಿಎಮ್ಎ ಮುಂತಾದ ಡ್ರಗ್ಸ್ ಗಳನ್ನು ಗೋವಾದಿಂದ ನಗರಕ್ಕೆ ಅಕ್ರಮ ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ. 

ಪೊಲೀಸ್ ಅಧಿಕಾರಿಗಳು 14 ಲಕ್ಷ ಮೌಲ್ಯದ ಅಕ್ರಮ ಡ್ರಗ್ಸ್ 97,500 ರೂಪಾಯಿ ಮೊತ್ತದ ನಗದು, 3 ಕಾರು ಹಾಗೂ 5 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಗ್ರಾಹಕರೂ ಆಗಿರುವ ಪೆಡ್ಲರ್ ಅನುರಾಧ ಪ್ರಮುಖ ಆರೋಪಿಯಾಗಿದ್ದು, ಗೋವಾದಲ್ಲಿ ಹಲವು ವರ್ಷಗಳಿಂದ ಡ್ರಗ್ಸ್ ನ್ನು ಸಂಗ್ರಹಿಸುತ್ತಿದ್ದರು. ಹಣ ಸಂಪಾದನೆಗೆ ಡ್ರಗ್ಸ್ ನ್ನು ಹೈದರಾಬಾದ್ ಗೆ ಸಾರ್ವಜನಿಕ ಸಾರಿಗೆಯ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದರು ಈ ವೇಳೆ ಈ ಆರೋಪಿ ಪ್ರಭಾಕರ್ ಹಾಗೂ ವೆಂಕಟಗೆ ಪರಿಚಯವಾಗಿದ್ದಾರೆ. ಪ್ರಭಾಕರ್ ಹಾಗೂ ವೆಂಕಟ ಸ್ಥಳೀಯ ಆಹಾರ ಉದ್ಯಮದಲ್ಲಿ ಚಿರಪರಿಚಿತ ಹೆಸರಾಗಿದೆ. ಆದರೆ ಅವರು ಅಕ್ರಮ ಡ್ರಗ್ಸ್ ನ ಗ್ರಾಹಕರೂ ಆಗಿದ್ದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ 

ಗೋವಾದಲ್ಲಿ ಇನ್ನಷ್ಟೇ ಪೊಲೀಸರಿಗೆ ಪತ್ತೆಯಾಗಬೇಕಿರುವ ಸ್ಥಳದಿಂದ ಎಂಡಿಎಂಎ, ಎಕ್ಸ್ಟೆಸಿ ಮಾತ್ರೆಗಳು ಹಾಗೂ ಹರಳುಗಳನ್ನು ಈ ಆರೋಪಿ ಪ್ರಭಾಕರ್ ಹಾಗೂ ವೆಂಕಟಗೆ ಪೂರೈಕೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಮೊಕಿಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸರಕುಗಳನ್ನು ಹಂಚಿಕೊಳ್ಳಲು ಯೋಜನೆ ರೂಪಿಸಿದ್ದರು ಆದರೆ ಡೀಲ್ ವೇಳೆ ಅವರನ್ನು ಬಂಧಿಸಲಾಗಿದೆ

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago