AJIO ಹೆಸರಲ್ಲಿ ದೊಡ್ಡ ಹಗರಣವೊಂದು ಕೇಳಿಬಂದಿದೆ.ಗ್ರಾಹಕರೇ ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವ ಮುನ್ನ ಎಚ್ಚರ….
ಆನ್ಲೈನ್ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಬ್ರಾಂಡ್ AJIO ಬಗ್ಗೆ ಬಹುತೇಕರಿಗೆ ಗೊತ್ತಿರುತ್ತೆ. ಹಲವರು ಇಲ್ಲಿ ಬಟ್ಟೆ ಮುಂತಾದುವನ್ನು ಶಾಪಿಂಗ್ ಮಾಡ್ತಾರೆ.ಆದರೆ,ಇತ್ತೀಚೆಗೆ ಆಜಿಯೋ ಹೆಸರಲ್ಲಿ ದೊಡ್ಡ ಹಗರಣ ವೊಂದು ಕೇಳಿಬಂದಿದೆ.ಈ ಹಿನ್ನಲೆ ನೀವು ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವ ಮುನ್ನ ಎಚ್ಚರ.
ಸಾರ್ವಜನಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಹೆಚ್ಚುವರಿ ನಿರ್ದೇಶನಗಳ ಅಗತ್ಯವಿದ್ದರೆ ಪೊಲೀಸರು ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಲು ಮುಕ್ತರಾಗಿದ್ದಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೇಳಿದ್ದರೆ. ಇ-ಕಾಮರ್ಸ್ ಪ್ಲಾಟ್ಫಾರ್ಮ್ www.ajio.com ನ ಆಪರೇಟರ್ ರಿಲಯನ್ಸ್ ಇಂಡಸ್ಟ್ರೀಸ್ ಸಲ್ಲಿಸಿದ ದೂರನ್ನು ಅನುಸರಿಸಿ ನ್ಯಾಯಾಲಯ ಈ ಆದೇಶ ನೀಡಿದೆ.
AJIO ಹಗರಣ ಎಂದರೇನು?
AJIO ಹಗರಣದಲ್ಲಿ ಅಪರಾಧಿಗಳು ಜನರನ್ನು ಮೋಸಗೊಳಿಸಲು ಸ್ಕ್ರ್ಯಾಚ್ ಕೂಪನ್ಗಳು/ಕಾರ್ಡ್ಗಳು ಮತ್ತು ಬಹುಮಾನದ ಹಣದ ಯೋಜನೆಗಳನ್ನು ಬಳಸುತ್ತಾರೆ ಎಂದು ಹೇಳಲಾಗುತ್ತಿದೆ. ವಂಚಕರು Ajio ಹೆಸರಿನಲ್ಲಿ ಸಂವಹನವನ್ನು ಕಳುಹಿಸುತ್ತಾರೆ ಮತ್ತು ಅಂತಹ ಯೋಜನೆಗಳಿಗೆ ಹಣವನ್ನು ಠೇವಣಿ ಮಾಡಲು ಜನರನ್ನು ಕೇಳುತ್ತಾರೆ. ಗ್ರಾಹಕರಿಗೆ 5,000 ರೂ.ಗಳಿಂದ 10,00,000 ರೂ.ವರೆಗಿನ ಮೊತ್ತವನ್ನು ಠೇವಣಿ ಮಾಡಲು ದುಷ್ಕರ್ಮಿಗಳು ಮನವಿ ಮಾಡುತ್ತಾರೆ. ಹಾಗೂ ಸ್ಕ್ರ್ಯಾಚ್ ಕಾರ್ಡ್ಗಳ ಮೂಲಕ ಠೇವಣಿ ಮಾಡಿದ ಹಣವನ್ನು ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿಕೊಂಡು ವಂಚನೆ ಮಾಡ್ತಿದ್ದಾರೆ ಎಂದು AJIO ಹೇಳಿದೆ.
AJIO’ ಮತ್ತು ‘AJIO Online Shopping Private Limited’ ಹೆಸರಿನಲ್ಲಿ ಹಣ ಸಂಗ್ರಹಿಸುವ ಉದ್ದೇಶದಿಂದ ವಂಚಕರು ಈ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ಮನವರಿಕೆಯಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಪತ್ರಗಳು ಮತ್ತು ಸ್ಕ್ರ್ಯಾಚ್ ಕಾರ್ಡ್ಗಳನ್ನು ಒಳಗೊಂಡಂತೆ ಮೋಸದ ಸಂವಹನಗಳನ್ನು ಈ ಜನರು ಬಳಸುತ್ತಾರೆ. ಇದನ್ನು ಪಡೆಯುವವರಿಗೆ AJIO ನಿಂದ ಕಾನೂನುಬದ್ಧ ಸಂವಹನವನ್ನು ಕಳಿಸಲಾಗಿದೆ ಎಂದು ಬಹುತೇಕರಿಗೆ ಮನವರಿಕೆಯಾಗುತ್ತದೆ. ಅವರಿಗೆ ವ್ಯತ್ಯಾಸ ಗೊತ್ತಾಗಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆ ಸಂಬಂಧಿತ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲು ನ್ಯಾಯಾಲಯವು ಆದೇಶಿಸಿದೆ. ಹಾಗೂ, ಪ್ರಾರಂಭದಿಂದ ಇಲ್ಲಿಯವರೆಗಿನ ಖಾತೆಯ ಸಂಪೂರ್ಣ ಸ್ಟೇಟ್ಮೆಂಟ್, KYC ವಿವರಗಳು ಮತ್ತು ಲಭ್ಯವಿರುವ ಯಾವುದೇ ಮಾಹಿತಿ ನೀಡುವಂತೆಯೂ ಸೂಚಿಸಿದೆ.
ಅಲ್ಲದೆ, ಅವರು ಬಳಸ್ತಿರೋ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲು ಮತ್ತು ಈ ಸಂಖ್ಯೆಗಳನ್ನು ನೋಂದಾಯಿಸಿದ ವ್ಯಕ್ತಿಗಳ ಗುರುತಿನ ಬಗ್ಗೆ ದಾಖಲೆಗಳನ್ನು ಒದಗಿಸಲು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಸೂಚಿಸಲಾಗಿದೆ. ಕೋಲ್ಕತ್ತಾ ಮೂಲದ ವಿಳಾಸದಿಂದ AJIO ಹೆಸರಲ್ಲಿ ವಂಚನೆ ಮಾಡಲಾಗ್ತಿದೆ ಎಂದು ರಿಲಯನ್ಸ್ 6 ಜನರು ಹಾಗೂ ಸಂಸ್ಥೆ ವಿರುದ್ಧ ದೂರು ಸಲ್ಲಿಸಿದೆ.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…