ಕಾಣಿಯೂರು : ಅ.29ರಂದು ಸುರಿದ ಬಾರಿ ಗಾಳಿ, ಮಳೆ ಹಾಗೂ ಸಿಡಿಲಿನಿಂದ ಬೆಳಂದೂರು ಕೊಡೆಂಕೇರಿ ಎಂಬಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯುಂಟಾದ ಘಟನೆ ನಡೆದಿದೆ.
ಸಿಡಿಲಿನಿಂದಾಗಿ ಮಹಾಬಲ ಗೌಡ ಅವರ ತಾರಸಿ ಮನೆಯ ಗೋಡೆ ಬಿರುಕುಗೊಂಡಿದ್ದು ವಯರಿಂಗ್ ಹಾನಿಯುಂಟಾಗಿದೆ.
ಘಟನಾ ಸ್ಥಳಕ್ಕೆ ಬೆಳಂದೂರು ಗ್ರಾಮಕರಣಿಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.