ಇಂದು ಟೀಮ್ ಒಳಿತು ಮಾಡು ಮನುಷ ತಂಡದಿಂದ
ಉಚಿತ ಆರೋಗ್ಯ ತಪಾಸಣೆ ಹಾಗೂ ಆಧಾರ್ ನೋಂದಣಿ ಮತ್ತು 399/-ಕ್ಕೆ 10 ಲಕ್ಷದ ಅಪಘಾತ ವಿಮೆ ನೋಂದಾವಣಾ ಶಿಬಿರ
ಪುತ್ತೂರಿನ ಟೀಮ್ ಒಳಿತು ಮಾಡು ಮನುಷ ತಂಡದ ಮುಂದಾಳತ್ವದಲ್ಲಿ ಜೆಸಿಐ ಪುತ್ತೂರು,ರೋಟರಿಕ್ಲಬ್ ಪುತ್ತೂರು ಎಲೈಟ್ ,ಪುತ್ತೂರು ಪೂರ್ವ,ಪುತ್ತೂರು ಸಿಟಿ,ಪುತ್ತೂರು ಸೆಂಟ್ರಲ್,ಪುತ್ತೂರು ಬೀರುಮಲೆ ಹಿಲ್, ಇನ್ನರ್ ವ್ಹಿಲ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು,ಭಾರತೀಯ ರೆಡ್ ಕ್ರಾಸ್ ಸೊಸೈಟಿ ಪುತ್ತೂರು,ಪುತ್ತಿಲ ಪರಿವಾರ ಪುತ್ತೂರು, ಶ್ರೀ ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ ಪುತ್ತೂರು ಜಂಟಿ ಅಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಭಾಗಿತ್ವದಲ್ಲಿ
ಆಧಾರ್ ನೋಂದಣಿ ಮತ್ತು ಪರಿಷ್ಕರಣೆ ಹಾಗೂ
399/- ಕ್ಕೆ 10ಲಕ್ಷದ ಅಫಘಾತ ವಿಮೆಯ ಶಿಬಿರ.ಇದರೊಂದಿಗೆ
ಎ ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು ಇವರ ಸಹಬಾಗಿತ್ವದಲ್ಲಿ ಉಚಿತ ಅರೋಗ್ಯ ತಪಾಸಣೆ ಮತ್ತು ದಂತ ಚಿಕಿತ್ಸೆ ಶಿಬಿರ ನಡೆಯಲಿದೆ.ಶಿಬಿರದಲ್ಲಿ ಲಭ್ಯವಿರುವ ತಪಾಸಣೆ ಮತ್ತು ಚಿಕಿತ್ಸೆಗಳು :ಸಾಮಾನ್ಯ ಅರೋಗ್ಯ ತಪಾಸಣೆ (ಜನರಲ್ ಚಿಕಿತ್ಸೆ ),ಸ್ತ್ರೀ ರೋಗ ವಿಭಾಗ,ದಂತ ಪರೀಕ್ಷೆ ಹಾಗೂ ಚಿಕಿತ್ಸೆ ವಿಭಾಗ,ಹೃದಯ ಸಂಬಂಧಿ ರೋಗ ತಪಾಸಣೆ (ECG), ಕಿವಿ, ಮೂಗು ಮತ್ತು ಗಂಟಲು (ENT) ತಪಾಸಣೆ,ಕಣ್ಣಿನ ತಪಾಸಣೆ,ಚರ್ಮರೋಗ ತಪಾಸಣೆ ನಡೆಯಲಿದೆ.ಈ ಶಿಬಿರದಲ್ಲಿ ಪ್ರಾಥಮಿಕ ತಪಾಸಣೆ ನಡೆಸಲಾಗುವುದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಎ ಜೆ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಆಸ್ಪತ್ರೆಯಲ್ಲಿ ಮುಂದಿನ ಹಂತದ ಚಿಕಿತ್ಸೆಗೆ ರಿಯಾಯಿತಿ ದರದಲ್ಲಿ ಸೌಲಭ್ಯ ಒದಗಿಸಲಾಗುವುದು.ಹಾಗೂಟೀಮ್ ಒಳಿತು ಮಾಡು ಮನುಷ ತಂಡ ಮತ್ತು ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಾಗೂ ಅನಾರೋಗ್ಯ ಪೀಡಿತರಿಗೆ 25 ನೇ ಯೋಜನೆಯಾಗಿ ಆಹಾರ ಸಾಮಗ್ರಿ ವಿತರಣ ಕಾರ್ಯಕ್ರಮವು ಪುತ್ತೂರಿನ
ಲಯನ್ಸ್ ಸೇವಾ ಮಂದಿರದಲ್ಲಿ ಬೆಳಿಗ್ಗೆ 9 ರಿಂದ 2ರ ವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಕ್ಯಾಂಪ್ ಹಾಗೂ ಕೇವಲ ರೂ.399/- ಕ್ಕೇ ಹತ್ತು ಲಕ್ಷದ ಅಪಘಾತ ವಿಮೆಯ ವಿಶೇಷ ಶಿಬಿರ
ಸ್ಥಳ – ಲಯನ್ಸ್ ಸೇವಾ ಮಂದಿರ, ರೋಟರಿ ಮನಿಷಾ ಹಾಲ್ ಬಳಿ, ಸೈನಿಕ ಭವನ ರಸ್ತೆ, ಪುತ್ತೂರು.
ದಿನಾಂಕ 30-08-2023.ಬುಧವಾರ
ಸಮಯ – ಬೆಳಿಗ್ಗೆ 9ರಿಂದ
ಸಂಜೆ -4-00 ತನಕ
ತಾವುಗಳು ಈ ಶಿಬಿರದ ಪ್ರಯೋಜನ ವನ್ನು ಪಡೆದುಕೊಳ್ಳಬೇಕಾಗಿ ವಿನಂತಿ
ಬೇಕಾಗುವ ದಾಖಲೆಗಳು.-
ಜನ್ಮ ದಿನಾಂಕ ಬದಲಾವಣೆ
ವಿಳಾಸ ಬದಲಾವಣೆ
(ಈ ಮೇಲಿನ ದಾಖಲಾತಿ ಗಳಲ್ಲಿ.ಯಾವುದಾದರೂ ಒಂದನ್ನು ತರುವುದು)ಮೊಬೈಲ್ ಸಂಖ್ಯೆ ಜೋಡಣೆ ಮತ್ತು ಮಕ್ಕಳ.ಬಯೋಮೆಟ್ರಿಕ್ ಅಪ್ಡೇಟ್
ಸರಕಾರದ ಸಾಮಾಜಿಕ ಭದ್ರತೆ ಪಿಂಚಣಿ ದಾರರಿಗೆ ಪಡಿತರ ಚೀಟಿ ,ತಹಶೀಲ್ದಾರ್ ಅಥವಾ ಗೆಜೆಟೆಡ್ ಆಪೀಸರ್ ಸರ್ಟಿಫಿಕೇಟ್
(ಈ ಮೇಲಿನ ದಾಖಲಾತಿ ಗಳಲ್ಲಿ.ಯಾವುದಾದರೂ ಒಂದನ್ನು ತರುವುದು) ಮೊಬೈಲ್ ಸಂಖ್ಯೆ ಜೋಡಣೆ ಮತ್ತು ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್
ಸರಕಾರದ ಸಾಮಾಜಿಕ ಭದ್ರತೆ ಪಿಂಚಣಿ ದಾರರಿಗೆ
ಆಧಾರ್ ಜೋಡಣೆ ವ್ಯವಸ್ಥೆ
ಯಾವುದೇ ಖಾತೆಯನ್ನು ಹೊಂದಿಲ್ಲದವರು IPPB ಖಾತೆ
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…