ಉಪ್ಪಿನಂಗಡಿ : ಬೆಂಗಳೂರು ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕಂಬಳಕ್ಕೆ ಉಪ್ಪಿನಂಗಡಿಯಿಂದ ಕಂಬಳ ಕೋಣಗಳನ್ನು ಬಿಳ್ಗೊಡಲಾಯಿತು. ನವಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದ್ದು, ಕರಾವಳಿಯಿಂದ ಸುಮಾರು 250ಕ್ಕೂ ಅಧಿಕ ಕೋಣಗಳ ಜೋಡಿ ಭಾಗವಹಿಸುವ ನಿರಿಕ್ಷೆ ಇದೆ.
ಈಗಾಗಲೇ ಕಂಬಳ ತಯಾರಿ ಕೊನೆಯ ಹಂತದಲ್ಲಿದ್ದು, ಇದೀಗ ಕಂಬಳ ಕೋಣಗಳು ಬೆಂಗಳೂರಿನತ್ತ ಹೊರಟಿವೆ. ಇಂದು ಉಪ್ಪಿನಂಗಡಿಯ ಪದವಿ ಕಾಲೇಜು ಮೈದಾನದಲ್ಲಿ ಬೆಂಗಳೂರಿಗೆ ಹೊರಟ ಕಂಬಳ ಕೋಣಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಎಲ್ಲಾ ಕಂಬಳ ಕೋಣಗಳಿಗೆ ದೃಢೀಕರಣ ಪತ್ರವನ್ನು ಪಶುಸಂಗೋಪನಾ ಇಲಾಖೆ ವೈದ್ಯರು ಸ್ಥಳದಲ್ಲೇ ನೀಡಿದರು.
ಮೈದಾನದಲ್ಲಿ ತುಳುನಾಡಿದ ಧ್ವಜ ನಿಶಾನೆ ತೋರಿದ ಬಳಿಕ ಕಂಬಳ ಕೋಣಗಳನ್ನು ತುಂಬಿಕೊಂಡ ಲಾರಿಗಳು ಬೆಂಗಳೂರಿನತ್ತ ಹೊರಟಿವೆ. ಕಂಬಳ ಕೋಣಗಳಿಗೆ ಬೇಕಾದ ನೀರು ಹಾಗು ಇತರ ವಸ್ತುಗಳನ್ನು ವಾಹನದಲ್ಲೇ ತುಂಬಿಸಿಕೊಳ್ಳಲಾಗಿದೆ. ಅಲ್ಲದೆ ಕಂಬಳ ಕೋಣಗಳ ಜೊತೆಗೆ ಅದರ ಮಾಲಕರು ಮತ್ತು ಪರಿಚಾರಕರ ದಂಡು ಕೂಡ ಬೆಂಗಳೂರಿಗೆ ಹೊರಟಿದ್ದಾರೆ. ಉಪ್ಪಿನಂಗಡಿ-ಶಿರಾಡಿಘಾಟ್ ಮಾರ್ಗವಾಗಿ ಬೆಂಗಳೂರು ತಲುಪಲಿದ್ದು, ಮಧ್ಯಾಹ್ನ 2 ಗಂಟೆಗೆ ಹಾಸನ ತಲುಪಲಿರುವ ಕೋಣಗಳ ತಂಡ, ಹಾಸನದಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಕೋಣಗಳಿಗೆ ವಿಶ್ರಾಂತಿ. ಬಳಿಕ ಹಾಸನ- ಚನ್ನಪಟ್ಟಣ ಮಾರ್ಗವಾಗಿ ಬೆಂಗಳೂರು ಅರಮನೆ ಮೈದಾನ ತಲುಪಲಿರುವ ಕೋಣಗಳ ತಂಡ , ರಾತ್ರಿ ಸುಮಾರು 11 ಗಂಟೆಗೆ ಕೋಣಗಳು ತಲುಪುವ ನಿರೀಕ್ಷೆ ಇದೆ.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…