ಅಂತರಾಷ್ಟ್ರೀಯ

ಐಸ್ಲ್ಯಾಂಡ್ನಲ್ಲಿ 14 ಗಂಟೆಗಳ ಅಂತರದಲ್ಲಿ 800 ಭೂಕಂಪನಗಳು; ತುರ್ತು ಪರಿಸ್ಥಿತಿ ಘೋಷಣೆ

ರೇಕ್ಜಾವಿಕ್: ಕೆಲವೇ ಗಂಟೆಗಳ ಸಮಯದ ಅಂತರದಲ್ಲಿ ಹಲವು ಭಾರಿ ಪ್ರಮಾಣದ ಭೂಕಂಪನಗಳಿಗೆ ತುತ್ತಾದ ಐಸ್ ಲ್ಯಾಂಡ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

“ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರು ಗ್ರಿಂಡವಿಕ್‌ನ ಉತ್ತರದ ಸುಂಧ್‌ ಜುಕಗಿಗರ್‌ನಲ್ಲಿ ತೀವ್ರವಾದ ಭೂಕಂಪದ ಕಾರಣ ನಾಗರಿಕ ರಕ್ಷಣೆಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ” ಎಂದು ನಾಗರಿಕ ರಕ್ಷಣೆ ಮತ್ತು ತುರ್ತು ನಿರ್ವಹಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

“ಭೂಕಂಪಗಳು ಸಂಭವಿಸಿದಕ್ಕಿಂತ ದೊಡ್ಡದಾಗಬಹುದು, ಈ ಘಟನೆಗಳ ಸರಣಿಯು ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು” ಎಂದು ಆಡಳಿತವು ಎಚ್ಚರಿಸಿದೆ.

ಐಸ್ಲ್ಯಾಂಡಿಕ್ ಮೆಟ್ ಆಫೀಸ್ (IMO) ಕೆಲವೇ ದಿನಗಳಲ್ಲಿ ಜ್ವಾಲಾಮುಖಿ ಸ್ಫೋಟವು ಸಂಭವಿಸಬಹುದು ಎಂದು ಹೇಳಿದೆ.

ರಾಜಧಾನಿ ರೇಕ್ಜಾವಿಕ್‌ಗೆ ಸುಮಾರು 40 ಕಿಲೋಮೀಟರ್‌ ಗಳಷ್ಟು ದೂರದಲ್ಲಿ ಎರಡು ಪ್ರಬಲ ಭೂಕಂಪಗಳು ನಡೆದವು. ದೇಶದ ದಕ್ಷಿಣ ಕರಾವಳಿಯ ಹೆಚ್ಚಿನ ಭಾಗಗಳಲ್ಲಿ, ಕಿಟಕಿಗಳು ಮತ್ತು ಗೃಹೋಪಯೋಗಿ ವಸ್ತುಗಳು ಕಂಪಿಸಿದವು.

14 ಗಂಟೆಯ ಅಂತರದಲ್ಲಿ ಐಸ್ ಲ್ಯಾಂಡ್ ದೇಶದಲ್ಲಿ ಸುಮಾರು 800 ಭೂಕಂಪನಗಳು ಸಂಭವಿಸಿದೆ. ಅಕ್ಟೋಬರ್ ಅಂತ್ಯದಿಂದ ದ್ವೀಪದಲ್ಲಿ ಸುಮಾರು 24,000 ನಡುಕಗಳು ದಾಖಲಾಗಿವೆ ಎಂದು ಐಎಂಒ ಹೇಳಿದೆ.

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago