ಇತರೆ

ನವರಾತ್ರಿ ಉತ್ಸವ ಮಂಡಳಿಗಳು ಮತ್ತು ಗರಬಾ ಆಯೋಜಕರಿಗೆ, ಹಿಂದೂ ಜನಜಾಗೃತಿ ಸಮಿತಿ ಕರೆ !

ಲವ್ ಜಿಹಾದ್’ ತಡೆಯಲು ಗರಬಾದಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಿ !

Advertisement
Advertisement
Advertisement

ನವರಾತ್ರಿ ಉತ್ಸವ ಆರಂಭವಾಗುತ್ತಿದೆ. ಆದಿಶಕ್ತಿಯನ್ನು ಆರಾಧಿಸುವ ಉತ್ಸವ; ಆದರೆ ಇದೆ ವೇಳೆ ಲವ್ ಜಿಹಾದಿಗಳು ಸ್ತ್ರೀ ಶಕ್ತಿಯ ಮೇಲೆ ಆಘಾತವೆಸಗುತ್ತಾರೆ. ತಮ್ಮ ನಿಜ ಪರಿಚಯ ಮರೆಮಾಚಿ ಹಿಂದು ಹೆಸರು ಇಟ್ಟುಕೊಂಡು, ಮಣಿಕಟ್ಟಿನ ಮೇಲೆ ಕೆಂಪು ದಾರಗಳನ್ನು ಕಟ್ಟಿ ಲವ್ ಜಿಹಾದಿಗಳು ಗರಬಾ ಪೆಂಡಾಲಿಗೆ ನುಸುಳುತ್ತಾರೆ. ಆದ್ದರಿಂದ ಈ ಸಮಯದಲ್ಲಿ ಹಿಂದೂ ಯುವತಿಯರು, ಮಹಿಳೆಯರು ಲವ್ ಜಿಹಾದಿಗೆ ಬಲಿಯಾಗುವ ಘಟನೆಗಳು ಬೃಹತ್ ಪ್ರಮಾಣದಲ್ಲಿ ಬೆಳಕಿಗೆ ಬಂದಿವೆ.

ಈ ಹಿನ್ನೆಲೆಯಲ್ಲಿ ಹಿಂದೂ ಯುವತಿಯರ ಮತ್ತು ಮಹಿಳೆಯರ ಸುರಕ್ಷತೆಗಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಿಂದುಯೇತರರಿಗೆ ಗರಬಾದಲ್ಲಿ ಪ್ರವೇಶ ನಿಷೇಧಿಸಬೇಕು ಮತ್ತು ಇದರ ಬಗ್ಗೆ ಗರಬಾ ಪೆಂಡಾಲಿನ ಬಳಿ ದೊಡ್ಡ ಫಲಕ ಅಳವಡಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ನವರಾತ್ರಿ ಉತ್ಸವ ಮಂಡಳಿಗಳಿಗೆ ಮತ್ತು ಗರಬಾ ಆಯೋಜಕರಿಗೆ ಕರೆ ನೀಡಿದೆ.

ಜಾರ್ಖಂಡ್‌ನ ವಿಶೇಷ ಸಿಬಿಐ ನ್ಯಾಯಾಲಯವು ರಾಷ್ಟ್ರೀಯ ಶೂಟರ್ ತಾರಾ ಸಹದೇವ್ ಅವರನ್ನು ಇತ್ತೀಚೆಗೆ ಹಿಂದೂ ಎಂದು ಮದುವೆಯಾದ ರಾಕಿಬುಲ್ ಹಸನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಮತ್ತು ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಿದ ರಾಕಿಬುಲ್ ಹಸನ್‌ ತಾಯಿಗೆ 10 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಿಂದ ‘ಲವ್ ಜಿಹಾದ್’ ಮತ್ತೊಮ್ಮೆ ಕಾನೂನಾತ್ಮಕವಾಗಿ ಸಾಬೀತಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಹಿಂದೂ ಹುಡುಗಿಯರನ್ನು ಸುಳ್ಳು ಪ್ರೀತಿಯ ಬಲೆಗೆ ಸಿಲುಕಿಸಿ ಮತಾಂತರಗೊಳಿಸಲಾಗಿದೆ, ಆದರೆ ಅದನ್ನು ವಿರೋಧಿಸಿದ ಅನೇಕ ಶ್ರದ್ಧಾ ವಾಲ್ಕರ್ ಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ‘ಲವ್ ಜಿಹಾದ್’ ಬಗ್ಗೆ ಕೇವಲ ಹಿಂದೂ ಸಂಘಟನೆಗಳಷ್ಟೇ ಅಲ್ಲದೆ ಅನೇಕ ಕ್ರೈಸ್ತ ಸಂಘಟನೆಗಳು ಮತ್ತು ಕ್ರೈಸ್ತ ಧರ್ಮ ಗುರುಗಳು ಕೂಡ ಖಂಡಿಸಿದ್ದಾರೆ. ಜೊತೆಗೆ ಕೇರಳದಲ್ಲಿನ ಕಮ್ಯುನಿಸ್ಟ್ ಪಕ್ಷದ ಇಬ್ಬರು ಮಾಜಿ ಮುಖ್ಯಮಂತ್ರಿ ಓಮಾನ್ ಚಂಡಿ ಮತ್ತು ವಿ ಎಸ್ ಅಚ್ಚತಾನಂದನ್ ಇವರು ಕೂಡ ಲವ್ ಜಿಹಾದಿನ ಭಯಾನಕತೆ ಒಪ್ಪಿದ್ದಾರೆ.

ಇದರಿಂದ ದೇಶದಲ್ಲಿನ ಗುಜರಾತ್, ಉತ್ತರಾಖಂಡ, ಹಿಮಾಚಲ್ ಪ್ರದೇಶ್, ಹರಿಯಾಣ, ಉತ್ತರಪ್ರದೇಶ, ಮಧ್ಯಪ್ರದೇಶ ಈ ಆರು ರಾಜ್ಯಗಳಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ರೂಪಿಸಲಾಗಿದ್ದು ಮಹಾರಾಷ್ಟ್ರ ಮತ್ತು ಗೋವಾ ಮುಂತಾದ ರಾಜ್ಯಗಳಲ್ಲಿ ಈ ಕಾನೂನು ರೂಪಿಸುವ ಮಾರ್ಗದಲ್ಲಿ ಇವೆ.ಹಿಂದೂ ಸಮಾಜ ಕೂಡ ತಮ್ಮ ಹೆಣ್ಣು ಮಕ್ಕಳು ಮಹಿಳೆಯರ ರಕ್ಷಣೆಗಾಗಿ ಜಾಗೃತವಾಗಿ ಮತ್ತು ಸಂಘಟಿತರಾಗುವ ಅತ್ಯಂತ ಅವಶ್ಯಕತೆ ಇದೆ. ಕೇವಲ ನವರಾತ್ರಿ ಅಲ್ಲದೆ, 365 ದಿನಗಳೂ ಹಿಂದುಗಳು ಲವ್ ಜಿಹಾದದಿಂದ ಸತರ್ಕವಾಗಿರುವುದು ಅವಶ್ಯಕವಾಗಿದೆ ಎಂದು ಸಮಿತಿ ಹೇಳಿದೆ.

ತಮ್ಮ ಸವಿನಯ, ಶ್ರೀ ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಸಂಪರ್ಕ : 9987966666

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago