ರಾಷ್ಟ್ರ

72 ವರ್ಷಗಳ ಬಳಿಕ ಹೊಸಧ್ವಜವನ್ನು ಅನಾವರಣಗೊಳಿಸಿದ ಭಾರತೀಯ ವಾಯುಸೇನೆ

ನವದೆಹಲಿ: 91ನೇ ಭಾರತೀಯ ವಾಯುಸೇನೆಯ ದಿನಾಚರಣೆಯ ಅಂಗವಾಗಿ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 72 ವರ್ಷಗಳ ಬಳಿಕ ಹೊಸಧ್ವಜವನ್ನು ಭಾರತೀಯ ವಾಯುಸೇನೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಅನಾವರಣ ಮಾಡಿದರು.

Advertisement
Advertisement
Advertisement

ಪ್ರಸ್ತುತ ಧ್ವಜದಲ್ಲಿ ರಾಯಲ್‌ ಇಂಡಿಯನ್‌ ಏರ್‌ಪೋರ್ಸ್‌ನ ಚಿಹ್ನೆಯ ಜೊತೆ ಯೂನಿಯನ್‌ ಜಾಕ್ ಹಾಗೂ ಕೆಂಪು ಬಿಳಿ ಮತ್ತು ನೀಲಿ ಮಿಶ್ರಿತ ಬಣ್ಣದ ಆರ್‌ಐಎಫ್‌ ರೌಂಡಲ್ ಇದೆ. ಈ ಧ್ವಜವನ್ನು ಮೊದಲು ನಾಲ್ಕು ವಾಯು ಸೇನಾ ಯೋಧರು ಚಲಿಸಬಲ್ಲ ಮಿನಿ ವೇದಿಕೆಯ ಮೇಲೆ ಜೋಡಿಸಿ ಏರ್ ಚೀಫ್‌ ಮಾರ್ಷಲ್ ಬಳಿ ಕರೆತಂದರು. ಏರ್ ಚೀಫ್ ಮಾರ್ಷಲ್‌ ಹೊಸ ಧ್ವಜವನ್ನು ಅನಾವರಣಗೊಳಿಸುತ್ತಿದ್ದಂತೆ, ಎರಡು ಡ್ರೋನ್‌ಗಳು ಪರದೆಯ ಹಿಂದಿನಿಂದ ಧ್ವಜದ ದೊಡ್ಡ ಆವೃತ್ತಿಯನ್ನು ತೋರಿಸಿದವು.

ನಂತರ ಧ್ವಜಸ್ತಂಭದಲ್ಲಿ ಹೊಸ ಧ್ವಜವನ್ನು ಹಾರಿಸಲಾಯ್ತು. ಹೊಸ ಧ್ವಜವನ್ನು ಹಾರಿಸುವಾಗ ಹಳೆಯ ಧ್ವಜವನ್ನು ಕೆಳಕ್ಕೆ ಎಳೆದು, ಗೌರವದಿಂದ ಮಡಚಿ ವಾಯುಸೇನೆ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು. ಈ ಹಳೆಯ ಧ್ವಜ ಇನ್ನು ಮುಂದೆ ಹೊಸದಿಲ್ಲಿಯ ಏರ್ ಫೋರ್ಸ್ ಮ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳಲಿದೆ. ನಂತರ, ವಾಯು ಸೇನೆಯ ತಂಡ ಮತ್ತು ಐಎಎಫ್ ಅಧಿಕಾರಿಗಳು ಪರೇಡ್‌ನಲ್ಲಿ ಹೊಸ ಧ್ವಜವನ್ನು ಹೊತ್ತೊಯ್ದರು. ಇದರ ಜೊತೆಗೆ ಗೌರವಾರ್ಥವಾಗಿ Mi-17v5 ಯುದ್ಧ ವಿಮಾನವೂ ಸಹ ಕೆಳಮಟ್ಟದಲ್ಲಿ ಹಾರಾಟ ನಡೆಸಿ ಹೊಸ ವಾಯುಪಡೆಯ ಧ್ವಜಕ್ಕೆ ಜೊತೆಯಾಯ್ತು.

ಈ ಹೊಸ ಧ್ವಜದಲ್ಲಿ ಐಎಎಫ್‌ನ ಚಿಹ್ನೆಯೂ ಇನ್ನು ಧ್ವಜದ ಬಲಮೂಲೆಯಲ್ಲಿರಲಿದೆ. ಎಡಭಾಗದಲ್ಲಿ ರಾಷ್ಟ್ರೀಯ ಧ್ವಜ ಹಾಗೂ ಕೆಳಭಾಗದಲ್ಲಿ ಐಎಎಫ್‌ನ ತ್ರಿವರ್ಣ ರೌಂಡಲ್‌(ವೃತ) ಇರಲಿದೆ. ಈ ಚಿಹ್ನೆಯನ್ನು 1951ರಲ್ಲಿ ಅಳವಡಿಸಲಾಗಿತ್ತು. ಈ ಏರ್‌ಫೋರ್ಸ್ ಚಿಹ್ನೆಯಲ್ಲಿ ರಾಷ್ಟ್ರ ಲಾಂಚನ ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದ್ದು, ಮೇಲ್ಭಾಗದಲ್ಲಿ ಅಶೋಕ ಲಾಂಛನವಿದೆ. ಇದರ ಕೆಳಗೆ ರೆಕ್ಕೆ ಬಿಚ್ಚಿ ಹಾರುವ ಹಿಮಾಲಯದ ಹದ್ದಿದ್ದು, ಹೋರಾಟದ ಗುಣವನ್ನು ಇದು ಸೂಚಿಸುತ್ತದೆ. ತಿಳಿ ನೀಲಿ ಬಣ್ಣದ ವೃತ್ತವೂ ಭಾರತೀಯ ವಾಯುಸೇನೆ ಎಂದು ಬರೆದಿದ್ದು ಹದ್ದನ್ನು ಸುತ್ತುವರಿಯುತ್ತದೆ.

ಈ ಹದ್ದಿನ ಕೆಳಗೆ ದೇವನಾಗರಿ ಭಾಷೆಯಲ್ಲಿ ಐಎಎಫ್ ಧ್ಯೇಯವಾಕ್ಯ ನಬೋ ಸ್ಪರ್ಶ್ ದೀಪ್ತಂ ಅಂದರೆ ‘ವೈಭವದಿಂದ ಆಕಾಶವನ್ನು ಸ್ಪರ್ಶಿಸುವುದು’ ಎಂಬುದನ್ನು ಚಿನ್ನದ ಬಣ್ಣದಲ್ಲಿ ಬರೆಯಲಾಗಿದೆ. ಈ ಧ್ಯೇಯವಾಕ್ಯವನ್ನು ಭಗವದ್ಗೀತೆಯ ಅಧ್ಯಾಯ 11ರ 24ನೇ ಶ್ಲೋಕದಿಂದ ತೆಗೆಯಲಾಗಿದೆ.

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago