ಕರಾವಳಿ

ಮಂಗಳೂರು :ದಸರಾ ದೇವಸ್ಥಾನ ದರ್ಶನ ಪ್ಯಾಕೇಜ್ ಘೋಷಿಸಿದ ಕೆಎಸ್‌ಆರ್ ಟಿಸಿ

ಮಂಗಳೂರು, ಅ.5: ದಸರಾ ಹಬ್ಬದ ಸಮಯದಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಅನುಕೂಲವಾಗುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮವು ದಸರಾ ದೇವಸ್ಥಾನ ದರ್ಶನ ಪ್ಯಾಕೇಜ್ ಘೋಷಿಸಿದೆ. ಕಳೆದ ವರ್ಷ ಮಂಗಳೂರು ವಿಭಾಗದಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿದ್ದ ಪ್ಯಾಕೇಜ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಕಾರಣ ಈ ಬಾರಿಯೂ ಪ್ಯಾಕೇಜ್ ಇರಲಿದೆ.

Advertisement
Advertisement
Advertisement

ಕರಾರಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ನರ್ಮ್ ನಗರ ಹಾಗೂ ನಗರ ವೋಲ್ವೋ ಸಾರಿಗೆ ವಾಹನಗಳೊಂದಿಗೆ ವಿಶೇಷ ಪ್ಯಾಕೇಜ್ ಪ್ರವಾಸ ಕಾರ್ಯಾಚರಣೆ ನಡೆಸಲಿದೆ. ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು ಮಾರ್ಗದಲ್ಲಿ ವಿಶೇಷ ಪ್ಯಾಕೇಜ್ ಪ್ರವಾಸವ ಅ. 15ರಿಂದ 24 ರವರೆಗೆ ಇರಲಿದೆ. www.ksrtc.in ನಲ್ಲಿ ಮುಂಗಡ ಆಸನ ಕಾಯ್ದಿರಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ಯಾಕೇಜ್ -1: ಮಂಗಳೂರು ದಸರಾ ದರ್ಶನ

(ಈ ಪ್ಯಾಕೇಜ್ ಪ್ರವಾಸಕ್ಕೆ ನರ್ಮ್ ಬಸ್ ನಲ್ಲಿ ಪ್ರತಿ ಪ್ರಯಾಣಿಕರಿಗೆ 400 ರೂ ಇದ್ದರೆ (ಊಟ, ಉಪಹಾರ ಹೊರತುಪಡಿಸಿ), 6ರಿಂದ 12 ವರ್ಷವರೆಗಿನ ಮಕ್ಕಳಿಗೆ ತಲಾ 300 ರೂ ನಿಗದಿ ಪಡಿಸಲಾಗಿದೆ. ಇದೇ ಪ್ಯಾಕೇಜ್ ನ ನಗರ ವೋಲ್ವೊ ಬಸ್ ನಲ್ಲಿ ವಯಸ್ಕರಿಗೆ 500 ರೂ ಮತ್ತು ಮಕ್ಕಳಿಗೆ 400 ರೂ ನಿಗದಿ ಪಡಿಸಲಾಗಿದೆ.

ಪ್ಯಾಕೇಜ್ 2: ಮಂಗಳೂರು- ಮಡಿಕೇರಿ

(ಕರ್ನಾಟಕ ಸಾರಿಗೆ ವಯಸ್ಕರಿಗೆ 500 ರೂ ಮತ್ತು ಮಕ್ಕಳಿಗೆ 400 ರೂ)

ಪ್ಯಾಕೇಜ್ 3: ಮಂಗಳೂರು- ಕೊಲ್ಲೂರು

(ಕರ್ನಾಟಕ ಸಾರಿಗೆ ವಯಸ್ಕರಿಗೆ 500 ರೂ ಮತ್ತು ಮಕ್ಕಳಿಗೆ 400 ರೂ)

ಪ್ಯಾಕೇಜ್ 4: ಪಂಚದುರ್ಗಾ ದರ್ಶನ

(ನರ್ಮ್ ನಗರ ಸಾರಿಗೆ ವಯಸ್ಕರಿಗೆ 400 ರೂ ಮತ್ತು ಮಕ್ಕಳಿಗೆ 300 ರೂ)

ಉಚಿತ ಪ್ರಯಾಣವಿಲ್ಲ!

ಶಕ್ತಿ ಯೋಜನೆ ಮೂಲಕ ಕೆಎಸ್ಸಾರ್ಟಿಸಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದೆ. ಆದರೆ ದಸರಾ ಪ್ಯಾಕೇಜ್‌ ಸಹಿತ ವಿಶೇಷ ಪ್ಯಾಕೇಜ್‌ ರೂಪಿಸುವ ವೇಳೆ ಎಲ್ಲರೂ ದರ ನೀಡಿಯೇ ಪ್ರಯಾಣಿಸಬೇಕಾಗುತ್ತದೆ. ಕಳೆದ ಬಾರಿಯ ಪ್ಯಾಕೇಜ್‌ನಲ್ಲಿಯೂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸಿ ಈ ಪ್ಯಾಕೇಜ್‌ನ ಸದುಪಯೋಗ ಮಾಡಿದ್ದರು.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago