ಆಟೋಮೊಬೈಲ್

ಸ್ಪೋರ್ಟಿ ವಿನ್ಯಾಸದ ಯಮಹಾ ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಬಿಡುಗಡೆ

ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಯಮಹಾ ಕಂಪನಿ ತನ್ನ ಜನಪ್ರಿಯ ವೈಜೆಡ್ಎಫ್-ಆರ್15ಎಂ, ಎಂಟಿ-15 ವಿ2.0 ಮತ್ತು ರೇ ಜೆಡ್ಆರ್ 125 ಎಫ್ಐ ಮಾದರಿಗಳಲ್ಲಿ ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಗಳು ಎಕ್ಸ್ ಶೋರೂಂ ಪ್ರಕಾರ ರೂ. 92,330 ರಿಂದ 1,97,200 ಬೆಲೆ ಹೊಂದಿವೆ.

Advertisement
Advertisement
Advertisement

ಆಕರ್ಷಕ ವಿನ್ಯಾಸದ ವೈಜೆಡ್ಎಫ್-ಆರ್15ಎಂ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ರೂ. 1,97,200 ಬೆಲೆ ಹೊಂದಿದ್ದರೆ, ಎಂಟಿ-15 ವಿ2.0 ಆವೃತ್ತಿಯು ರೂ. 172,700 ಬೆಲೆ ಹೊಂದಿದೆ. ಹಾಗೆಯೇ ರೇ ಜೆಡ್ಆರ್ 125 ಎಫ್ಐ ಆವೃತ್ತಿಯು ರೂ. 92,330 ಬೆಲೆ ಪಡೆದುಕೊಂಡಿದ್ದು, ಇವು ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿವೆ.

ಗ್ರಾಹಕರ ಬೇಡಿಕೆಯೆಂತೆ ವಿವಿಧ ಆವೃತ್ತಿಗಳನ್ನು ಮಾರಾಟ ಮಾಡುತ್ತಿರುವ ಯಮಹಾ ಕಂಪನಿಯು ರೇಸಿಂಗ್ ಪ್ರಿಯರಿಗಾಗಿ ದಿ ಕಾಲ್ ಆಫ್ ದಿ ಬ್ಲೂ ಅಭಿಯಾನದಡಿಯಲ್ಲಿ ಮಾನ್‌ಸ್ಟರ್ ಎನರ್ಜಿ ಮೋಟೋಜಿಪಿ ಆವೃತ್ತಿಗಳ ಅತ್ಯಾಕರ್ಷಕ ಶ್ರೇಣಿಯನ್ನು ಪರಿಚಯಿಸಿದೆ. ಹೊಸ ಆವೃತ್ತಿಗಳು ದೇಶಾದ್ಯಂತ ಹರಡಿಕೊಂಡಿರುವ ಯಮಹಾ ಕಂಪನಿಯ ಎಲ್ಲಾ ಪ್ರೀಮಿಯಂ ಬ್ಲೂ ಸ್ಕ್ವೇರ್ ಶೋರೂಂಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಆವೃತ್ತಿಗಳು ಆಕರ್ಷಕ ಸ್ಪೋರ್ಟಿ ಗ್ರಾಫಿಕ್ಸ್ ಪಡೆದುಕೊಳ್ಳಲಿವೆ.

ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಗಳಲ್ಲಿ ಯಮಹಾ ಕಂಪನಿಯು ಫ್ಯೂಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳ ಮೇಲೆ ಆಕರ್ಷಕವಾದ ಗ್ರಾಫಿಕ್ ನೀಡಲಾಗಿದ್ದು, ಇವು ರೇಸಿಂಗ್ ಹಿನ್ನಲೆಯನ್ನು ಪ್ರದರ್ಶಿಸುತ್ತವೆ. ಆದರೆ ಹೊಸ ಆವೃತ್ತಿಗಳಲ್ಲಿನ ಎಂಜಿನ್ ಆಯ್ಕೆ ಸಾಮಾನ್ಯ ಮಾದರಿಗಳಲ್ಲಿರುವಂತೆ ಮುಂದುವರೆಯಲಿದ್ದು, ಮುಂಬರುವ ಹಬ್ಬದ ಋತುವಿನಲ್ಲಿ ಹೆಚ್ಚಿನ ಬೇಡಿಕೆ ದಾಖಲಿಸಲು ಇವು ಸಹಕಾರಿಯಾಗಲಿವೆ.

ಯಮಹಾ ಕಂಪನಿಯು ಸದ್ಯಕ್ಕೆ ವೈಜೆಡ್ಎಫ್-ಆರ್15ಎಂ, ಎಂಟಿ-15 ವಿ2.0 ಮತ್ತು ರೇ ಜೆಡ್ಆರ್ 125 ಎಫ್ಐ ಮಾದರಿಗಳಲ್ಲಿ ಮಾತ್ರ ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಎರೋಎಕ್ಸ್ 155 ಸ್ಕೂಟರ್ ಮಾದರಿಯಲ್ಲೂ ಹೊಸ ಆವೃತ್ತಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಇನ್ನು ವೈಜೆಡ್ಎಫ್-ಆರ್15ಎಂ ಬೈಕ್ ಮಾದರಿಯು 155ಸಿಸಿ ಮತ್ತು ಎಂಟಿ-15 ವಿ2.0 155ಸಿಸಿ ಮತ್ತು ರೇ ಜೆಡ್ಆರ್ 125 ಎಫ್ಐ ಮಾದರಿಯಲ್ಲಿ 125 ಸಿಸಿ ಎಂಜಿನ್ ಆಯ್ಕೆ ನೀಡಲಾಗಿದ್ದು, ಇವು ಬ್ಲ್ಯೂ ಕೋರ್ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಹೊಂದಿರಲಿವೆ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago