ವ್ಯವಹಾರ

ಏಷ್ಯನ್‌ ಪೇಂಟ್ಸ್‌ ಸಹಸಂಸ್ಥಾಪಕ ಅಶ್ವಿನ್‌ ದಾನಿ ನಿಧನ

ನವದೆಹಲಿ,ಸೆ.28: ಏಷ್ಯನ್ ಪೇಂಟ್ಸ್‌ನ ಸಹ ಸಂಸ್ಥಾಪಕ ಮತ್ತು ಕಂಪನಿಯ ಕಾರ್ಯನಿರ್ವಾಹಕ ಅಲ್ಲದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಕುಟುಂಬದ ಎರಡನೇ ತಲೆಮಾರಿನ ವಂಶಸ್ಥರಾದ ಅಶ್ವಿನ್ ದಾನಿ ಅವರು ಸೆಪ್ಟೆಂಬರ್ 28 ರಂದು ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾದರು.

Advertisement
Advertisement
Advertisement

ದಾನಿ ಅವರು 1968 ರಲ್ಲಿ ಏಷ್ಯನ್ ಪೇಂಟ್ಸ್‌ನಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ತಮ್ಮ ಪ್ರಯಾಣವನ್ನು ಆರಂಭಿಸಿದ್ದ ಅವರು ಬಳಿಕ 1998ರಿಂದ 2009ರ ಮಾರ್ಚ್‌ವರೆಗೆ ಕಂಪನಿಯ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸ್ಥಾನದವರೆಗೆ ಏರಿದ್ದರು. ಇವರು ಎಂಡಿ ಆಗಿದ್ದ ಕಾಲದಲ್ಲಿಯೇ ಏಷ್ಯನ್‌ ಪೇಂಟ್ಸ್‌ ಭಾರತದ ಅತಿದೊಡ್ಡ ಪೇಂಟ್ಸ್‌ ಉತ್ಪಾದಕ ಕಂಪನಿ ಎನಿಸಿತ್ತು. ಇಂದು 21,700 ಕೋಟಿ ರೂಪಾಯಿ ವ್ಯವಹಾರ ನಡೆಸುವ ಏಷ್ಯನ್‌ ಪೇಂಟ್ಸ್‌ ಸಮೂಹ ದೇಶದ ಅತೀದೊಡ್ಡ ಪೇಂಟ್‌ ಉತ್ಪಾದಕ ಕಂಪನಿ ಎನಿಸಿಕೊಂಡಿದೆ. ಅಶ್ವಿನ್‌ ದಾನಿ ನಿಧನದ ಬೆನ್ನಲ್ಲಿಯೇ ಷೇರು ಮಾರುಕಟ್ಟೆಯಲ್ಲಿ ಏಷ್ಯನ್ಸ್‌ ಪೇಂಟ್ಸ್‌ ಷೇರುಗಳ ಮೇಲೆ ಪರಿಣಾಮ ಬೀರಿದ್ದು. ಶೇ. 4ರಷ್ಟು ಕುಸಿತ ಕಂಡಿವೆ.

1944ರಲ್ಲಿ ಸೆಪ್ಟೆಂಬರ್‌ 26 ರಂದು ಮುಂಬೈನಲ್ಲಿ ಜನಿಸಿದ್ದ ಅಶ್ವಿನ್‌ ದಾನಿ, ಮುಂಬೈ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ತಮ್ಮ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪೂರ್ಣಗೊಳಿಸಿದ್ದರು. ಆ ಬಳಿಕ ಅಕ್ರಾನ್ ವಿಶ್ವವಿದ್ಯಾನಿಲಯದಿಂದ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದರು. ಡೆಟ್ರಾಯಿಟ್‌ನಲ್ಲಿ ರಸಾಯನಶಾಸ್ತ್ರಜ್ಞರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, 1968 ರಲ್ಲಿ, ಅವರು ತಮ್ಮ ಕುಟುಂಬ ವ್ಯವಹಾರವಾದ ಏಷ್ಯನ್ ಪೇಂಟ್ಸ್‌ಗೆ 1968 ರಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇರಿಕೊಂಡಿದ್ದರು.

ಇಷ್ಟು ವರ್ಷಗಳಲ್ಲಿ, ಡೈರೆಕ್ಟರ್ (ಸಂಶೋಧನೆ ಮತ್ತು ಅಭಿವೃದ್ಧಿ), ಕಾರ್ಯ ನಿರ್ದೇಶಕರು, ಪೂರ್ಣ ಸಮಯದ ನಿರ್ದೇಶಕರು, ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಏಷ್ಯನ್‌ ಪೇಂಟ್ಸ್‌ನಲ್ಲಿ ಹಲವಾರು ಸ್ಥಾನಗಳನ್ನು ಹೊಂದಿದ್ದರು. ವ್ಯಾಪಾರ ಮತ್ತು ಬಣ್ಣಗಳ ವಲಯಕ್ಕೆ ಅತ್ಯಾಧುನಿಕ ಪರಿಕಲ್ಪನೆಗಳನ್ನು ಒದಗಿಸಲು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಳಸುವುದಕ್ಕಾಗಿ ದಾನಿ ಹೆಸರುವಾಸಿಯಾಗಿದ್ದರು.

ಅಶ್ವಿನ್ ದಾನಿ ಕಂಪ್ಯೂಟರ್ ಬಣ್ಣ ಹೊಂದಾಣಿಕೆಯ ಪರಿಕಲ್ಪನೆಯನ್ನು ಏಷ್ಯನ್‌ ಪೇಂಟ್ಸ್‌ನಲ್ಲಿ ಪ್ರಾರಂಭಿಸಿದ್ದರು. ಈಗ ಬಣ್ಣಗಳು, ಪ್ಲಾಸ್ಟಿಕ್‌ಗಳು, ಮುದ್ರಣ ಶಾಯಿಗಳು ಮತ್ತು ಜವಳಿಗಳಂತಹ ಉದ್ಯಮಗಳಲ್ಲಿ ವ್ಯಾಪಕವಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ಅದರೊಂದಿಗೆ ಅವರು ಅಪೊಕೊಲೈಟ್‌, ನ್ಯಾಚುರಲ್ ವುಡ್ ಫಿನಿಶ್, ಮರದ ಮೇಲ್ಮೈಗಳಿಗೆ ಒಂದು ನವೀನ ಫಿನಿಶಿಂಗ್ ಸಿಸ್ಟಮ್ ಮತ್ತು ಆಟೋಮೊಬೈಲ್ ಆಫ್ಟರ್ ಮಾರ್ಕೆಟ್ ವಿಭಾಗದಲ್ಲಿ ವ್ಯಾಪಕವಾಗಿ ಅಳವಡಿಸಲಾಗಿರುವ ವೇಗವಾಗಿ ಒಣಗಿಸುವ ಅಲ್ಕಿಡ್ ಎನಾಮಲ್‌ ಆಟೋಮೋಟಿವ್ ರಿಫೈನಿಶಿಂಗ್ ಸಿಸ್ಟಮ್ನಂತಹ ಅದ್ಭುತ ಉತ್ಪನ್ನಗಳನ್ನು ರಚಿಸಿದ್ದರಿಂದ ಗಮನಸೆಳೆದಿದ್ದರು.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago