ರಾಜ್ಯ

ಎದ್ದು ನಿಂತು ಆಶೀರ್ವದಿಸುವ ಕೊಲ್ಕತ್ತದ ಗಣಪ

ಕೊಲ್ಕತ್ತ:ಸಾರ್ವಜನಿಕ ಗಣಪತಿಗಳು ಚಮತ್ಕಾರ ಪ್ರದರ್ಶನ ಮಾಡದಿದ್ದರೆ ಹೇಗೆ? ಮನೆಮಂದಿ ಮಕ್ಕಳನ್ನು ಕರೆದುಕೊಂಡು ದೂರ ಪ್ರಯಾಣಿಸಿದ್ದಕ್ಕೆ ಏನಾದರೂ ಬೆರಗು, ಪುಳಕ, ಖುಷಿ ಅನುಭವವನ್ನು ಆ ಗಣಪ ಕೊಡಲೇಬೇಕು. ಕೊಲ್ಕತ್ತದ ಉಲ್ಟಾಡಾಂಗನ ನಾಗರಕಲ್ಲು​ ಮಾರ್ಕೆಟ್ಟಿನಲ್ಲಿ ಪ್ರತಿಷ್ಠಾಪಿಸಿರುವ ಈ ಗಣಪ, ಭಕ್ತಾದಿಗಳು ಪಾದ ಮುಟ್ಟುತ್ತಿದ್ದಂತೆ ಎದ್ದುನಿಂತು ಆಶೀರ್ವದಿಸುತ್ತಾನೆ. ನೆಟ್ಟಿಗರು ಈ ಸೋಜಿಗವನ್ನು ಬೆರಗಿನಿಂದ ನೋಡುತ್ತಿದ್ದಾರೆ.

Advertisement
Advertisement
Advertisement

‘ಪ್ರತೀ ವರ್ಷ ಹೊಸ ರೀತಿಯಲ್ಲಿ ಗಣಪನನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುತ್ತೇವೆ. ಒಂದು ರಾತ್ರಿ ಮಲಗಿರುವಾಗ ಈ ರೀತಿ ಗಣಪತಿಯನ್ನು ಚಮತ್ಕಾರಿಕವಾಗಿ ರೂಪಿಸಬೇಕು ಎಂಬ ಆಲೋಚನೆ ಮನಸಿಗೆ ಬಂದಿತು.ಇಲ್ಲಿ ಜಗನ್ನಾಥ ಪುರಿ ಶೈಲಿಯಲ್ಲಿ ಮಂಟಪವನ್ನು ತಯಾರುಮಾಡಲಾಗಿದೆ’ ಎಂದಿದ್ದಾರೆ ಪೂಜಾ ಸಮಿತಿಯ ಸದಸ್ಯರೊಬ್ಬರು.

ಮೂರ್ತಿಯಂತೆ ಸುಮ್ಮನೇ ಕುಳಿತುಕೊಳ್ಳುವುದನ್ನು ಬಿಟ್ಟು ಈ ಗಣಪ, ಪಾದ ಮುಟ್ಟಿದ ಪ್ರತಿಯೊಬ್ಬರಿಗೂ ಆಶೀರ್ವದಿಸುವ ರೀತಿ ನಿಜಕ್ಕೂ ಆಪ್ತ ಮತ್ತು ಸಂವೇದನಾಶೀಲ ಎನ್ನಿಸಿದೆ. ಈ ಗಣಪತಿಯ ಚಮತ್ಕಾರ ನೋಡಲು ಜನಸಾಗರವು ಹರಿದುಬರುತ್ತಿದೆ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago