ಕರಾವಳಿ

ಮಂಗಳೂರು ಕ್ಲಸ್ಟರ್‌ನಲ್ಲಿ ಹೂಡಿಕೆ: “ಸೌದಿಯ 25ಕ್ಕೂ ಅಧಿಕ ಕಂಪೆನಿಗಳ ಒಡಂಬಡಿಕೆ’

ಮಂಗಳೂರು: ಮಂಗಳೂರು ಡಿಜಿಟಲ್‌ ಎಕಾನಮಿ ಕ್ಲಸ್ಟರ್‌ನಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಆರಂಭಿಸಲು ಆಸಕ್ತಿ ತೋರಿಸಿ ಸೌದಿಯ 25ಕ್ಕೂ ಅಧಿಕ ಕಂಪೆನಿಗಳು ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಿವೆ ಎಂದು ಕೆಡಿಇಎಂ (ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌) ಮಂಗಳೂರು ಕ್ಲಸ್ಟರ್‌ನ ಲೀಡ್‌ ಇಂಡಸ್ಟ್ರಿ ಆಂಕರ್‌ ರೋಹಿತ್‌ ಭಟ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement

ಸೌದಿ ಅರೇಬಿಯಾದ ಅಲ್‌-ಖೋಬರ್‌ನಲ್ಲಿ ಕೆಡಿಇಎಂ ಸೆ. 7ರಂದು ನಡೆಸಿದ ರೋಡ್‌ಶೋ ವೇಳೆ ಸಂಭವನೀಯ ಹೂಡಿಕೆದಾರರೊಂದಿಗೆ ಫ‌ಲಪ್ರದ ಮಾತುಕತೆ ನಡೆದಿದೆ. ರೋಡ್‌ ಶೋ ಮೂಲಕ ಉದ್ಯಮಿಗಳಿಗೆ ಆಹ್ವಾನ ನೀಡಿದ್ದು ಸುಲಲಿತ ವ್ಯವಹಾರ, ಸುಸ್ಥಿರತೆಯ ವಿಶ್ವಾಸ ನೀಡಿದ್ದೇವೆ.

ರೋಡ್‌ಶೋನಲ್ಲಿ 35ಕ್ಕೂ ಅಧಿಕ ಕಂಪೆನಿಗಳ ಸಿಇಒಗಳು ಸೇರಿದಂತೆ 150ಕ್ಕೂ ಹೆಚ್ಚು ಸಿಎಕ್ಸ್‌ಒಗಳು ಪಾಲ್ಗೊಂಡಿದ್ದರು. 25ಕ್ಕೂ ಅಧಿಕ ಕಂಪೆನಿಗಳು ಲೆಟರ್‌ ಆಫ್ ಇಂಟೆಂಟ್‌ಗೆ ಸಹಿ ಹಾಕಿವೆ. ಕೆಡಿಇಎಂ ಜತೆಗೆ ನ್ಯಾಸ್ಕಾಂ, ಸಿಐಐ ಮಂಗಳೂರು, ಟಿಐಇ ಮಂಗಳೂರು, ಮೈಕ್ರೋ ಗ್ರಾಫಿಯೋ, ಕೆಸಿಸಿಐ ಮತ್ತು ಮಂಗಳೂರಿನ ಟೆಕ್‌ ಕಂಪೆನಿಗಳ ಪ್ರತಿನಿಧಿಗಳು ಕೂಡ ನಿಯೋಗದಲ್ಲಿದ್ದರು.

ದ.ಕ., ಉಡುಪಿ, ಉ.ಕ. ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಕ್ಲಸ್ಟರ್‌ನಲ್ಲಿ ಮುಂದಿನ 8ರಿಂದ 12 ತಿಂಗಳುಗಳಲ್ಲಿ 1,000ಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಐಟಿ ಸೇವೆ, ಬ್ಯಾಕ್‌ ಆಫೀಸ್‌ ಕಾರ್ಯಾಚರಣೆ ಮತ್ತು ಎಂಜಿನಿಯರಿಂಗ್‌ ವಿನ್ಯಾಸ ಸೇವೆಗಳಿಗಾಗಿ ಮಂಗಳೂರನ್ನು ಪ್ರಮುಖ ಕಾರ್ಯಕ್ಷೇತ್ರವನ್ನಾಗಿಸಲು ಸೌದಿ ಅರೇಬಿಯಾ ಕಂಪೆನಿಗಳು ಆಸಕ್ತಿ ತೋರಿಸಿವೆ.

ಕಳೆದ ಕೆಲವು ವರ್ಷಗಳಿಂದ ಮಂಗಳೂರಿನ ಉದ್ಯಮಿಗಳೊಂದಿಗೆ ಕೆಲಸ ಮಾಡುತ್ತಿರುವ ಕೆಡಿಇಎಂ ಇಲ್ಲಿನ ಕೈಗಾರಿಕಾ ಕ್ಲಸ್ಟರ್‌ನ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಕಳೆದ 18 ತಿಂಗಳಲ್ಲಿ ಮಂಗಳೂರು ಕ್ಲಸ್ಟರ್‌ನಲ್ಲಿ 40ಕ್ಕೂ ಹೆಚ್ಚು ಕಂಪೆನಿಗಳ ಘಟಕಗಳು ಸ್ಥಾಪನೆಯಾಗಿವೆ ಎಂದು ಅವರು ತಿಳಿಸಿದರು.

ಕ್ರೆಡಾೖ ಅಧ್ಯಕ್ಷ ವಿನೋದ್‌ ಪಿಂಟೋ, ಕೆಸಿಸಿಐನ ಆಶಿತ್‌ ಹೆಗ್ಡೆ, ಸಿಐಐ ಉಪಾಧ್ಯಕ್ಷ ಅಜಿತ್‌ ಕಾಮತ್‌ ಉಪಸ್ಥಿತರಿದ್ದರು.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago