ನಟಿ ಮೇಘನಾ ರಾಜ್ ಅವರು ಒಂದಷ್ಟು ವರ್ಷಗಳ ಹಿಂದೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದರು. ಆದರೆ ಚಿರಂಜೀವಿ ಸರ್ಜಾ ನಿಧನದ ಬಳಿಕ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಎಲ್ಲ ನೋವನ್ನು ಪಕ್ಕಕ್ಕೆ ಇಟ್ಟು ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಮೇಘನಾ ರಾಜ್ ಅವರು ‘ತತ್ಸಮ ತದ್ಭವ’ ಸಿನಿಮಾದ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಹೊಸ ನಿರ್ದೇಶಕ ವಿಶಾಲ್ ಆತ್ರೇಯಾ ಅವರು ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುವಂತಹ ಪ್ರಯತ್ನ ಮಾಡಿದ್ದಾರೆ. ಮೇಘನಾ ರಾಜ್ ಅವರ ಜೊತೆ ಪ್ರಜ್ವಲ್ ದೇವರಾಜ್ ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮೇಘನಾ ರಾಜ್ ಅವರಿಗೆ ಒಂದು ರೀತಿಯಲ್ಲಿ ಈ ಸಿನಿಮಾ ಚಾಲೆಂಜಿಂಗ್ ಆಗಿದೆ.
ಮರ್ಡರ್ ಮಿಸ್ಟರಿ:
ತತ್ಸಮ ತದ್ಭಮ’ ಸಿನಿಮಾದಲ್ಲಿ ಒಂದು ಮರ್ಡರ್ ಮಿಸ್ಟರಿ ಕಥೆ ಇದೆ. ಗಂಡನನ್ನು ಕಳೆದುಕೊಂಡ ಕಥಾನಾಯಕಿ ಆರಿಕಾ (ಮೇಘನಾ ರಾಜ್) ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಾಳೆ. ಅಲ್ಲಿ ಇರುವ ದಕ್ಷ ಪೊಲೀಸ್ ಅಧಿಕಾರಿ ಅರವಿಂದ್ಗೆ (ಪ್ರಜ್ವಲ್) ಈ ಕೇಸ್ ಬಹಳ ಸವಾಲಾಗಿ ಪರಿಣಮಿಸುತ್ತದೆ. ಪ್ರತಿ ಹಂತದಲ್ಲೂ ಅನುಮಾನ ಹೆಚ್ಚುತ್ತದೆ. ಆದರೆ ಅಪರಾಧಿ ಯಾರು ಎಂಬುದನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಅದರ ನಡುವೆ ಹೊಸ ಪಾತ್ರಗಳು ಕೂಡ ಎಂಟ್ರಿ ಪಡೆದುಕೊಳ್ಳುತ್ತವೆ. ನಂತರ ಬರುವುದು ಅಸಲಿ ಟ್ವಿಸ್ಟ್. ಹಾಗಾದರೆ ಕೊಲೆ ಮಾಡಿದವರು ಯಾರು? ಆ ಕೊಲೆಯ ಹಿಂದಿನ ಉದ್ದೇಶ ಏನು? ಕಥಾನಾಯಕಿ ಹೇಳಿದ್ದು ನಿಜವೋ ಸುಳ್ಳೋ ಎಂಬುದೆಲ್ಲ ತಿಳಿಯಬೇಕಾದರೆ ಪೂರ್ತಿ ಸಿನಿಮಾ ನೋಡಬೇಕು.
ಮೇಘನಾಗೆ ಮೆಚ್ಚುಗೆ:
ನಟಿ ಮೇಘನಾ ರಾಜ್ ಅವರಿಗೆ ಈ ಸಿನಿಮಾದಲ್ಲಿ ಸವಾಲಿನ ಪಾತ್ರ ಇದೆ. ಎರಡು ಡಿಫರೆಂಟ್ ಶೇಡ್ ಇರುವ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಇಡೀ ಸಿನಿಮಾದ ಕಥೆ ಅವರ ಸುತ್ತವೇ ಸುತ್ತುತ್ತದೆ. ಇದೊಂದು ನಾಯಕಿ ಪ್ರಧಾನ ಸಿನಿಮಾ ಆದ್ದರಿಂದ ಮೇಘನಾ ರಾಜ್ ಅವರು ಹೆಚ್ಚು ಸ್ಕ್ರೀನ್ ಸ್ಪೇಸ್ ಪಡೆದುಕೊಂಡಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳಿಗೆ ‘ತತ್ಸಮ ತದ್ಭವ’ ಸಿನಿಮಾ ಇಷ್ಟ ಆಗಲಿದೆ. ಮೇಘನಾ ರಾಜ್ ಅವರ ಕಮ್ಬ್ಯಾಕ್ಗೆ ಸೂಕ್ತವಾದಂತಹ ಕಥೆ ಈ ಸಿನಿಮಾದಲ್ಲಿದೆ.
ಮೆರುಗು ತಂದ ಪ್ರಜ್ವಲ್ ದೇವರಾಜ್:
ನಟ ಪ್ರಜ್ವಲ್ ದೇವರಾಜ್ ಅವರದ್ದು ‘ತತ್ಸಮ ತದ್ಭವ’ ಸಿನಿಮಾದಲ್ಲಿ ಹೀರೋ ಪಾತ್ರ ಅಲ್ಲ. ಆದರೂ ಕೂಡ ಅವರು ಹೀರೋ ರೀತಿಯಲ್ಲೇ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಕಥೆಗೆ ಪ್ರಮುಖ ತಿರುವುಗಳನ್ನು ನೀಡುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಂದಾಗಿ ಈ ಚಿತ್ರದ ಮೆರುಗು ಹೆಚ್ಚಿದೆ. ಇನ್ನುಳಿದಂತೆ ಬಾಲಾಜಿ ಮನೋಹರ್, ಅರವಿಂದ್ ಅಯ್ಯರ್, ಗಿರಿಜಾ ಲೋಕೇಶ್, ಶ್ರುತಿ, ಟಿ.ಎಸ್. ನಾಗಾಭರಣ, ರಾಜಶ್ರೀ ಪೊನ್ನಪ್ಪ ಅವರ ಪಾತ್ರಗಳು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಪರಿಣಾಮಕಾರಿ ಆಗಿವೆ.
ಪ್ರೇಕ್ಷಕರ ತಲೆಗೆ ಕೆಲಸ:
ಬೇರೆ ಸಿನಿಮಾಗಳಂತೆ ಗಮನ ಎತ್ತಲೋ ಇಟ್ಟುಕೊಂಡು ‘ತತ್ಸಮ ತದ್ಭವ’ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಯಾಕೆಂದರೆ, ಈ ಸಿನಿಮಾದ ಕಥೆಯು ಪ್ರೇಕ್ಷಕರ ತಲೆಗೆ ಕೆಲಸ ಕೊಡುತ್ತದೆ. ಎಲ್ಲ ದೃಶ್ಯಗಳನ್ನು ಬಹಳ ಗಮನವಹಿಸಿ ನೋಡಿದರೆ ಮಾತ್ರ ಅಸಲಿ ಕಹಾನಿ ಏನು ಎಂಬುದು ಅರ್ಥವಾಗುತ್ತದೆ. ಅತ್ತಿತ್ತ ನೋಡಿದರೆ ಲಿಂಕ್ ಮಿಸ್ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಈ ಪ್ರಕಾರದ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರಿಗೆ ‘ತತ್ಸಮ ತದ್ಭವ’ ಹಿಡಿಸುತ್ತದೆ. ಗಮನ ಬೇರೆಡೆಗೆ ಇಟ್ಟುಕೊಂಡು ಅರೆಬರೆ ಸಿನಿಮಾ ನೋಡಿದರೆ ರುಚಿಸದೇ ಇರಬಹುದು. ಬೇರೆ ಬೇರೆ ಕಾಲಘಟ್ಟದಲ್ಲಿ ಕಥೆಯನ್ನು ಹೇಳುವ ಕೆಲವು ದೃಶ್ಯಗಳಲ್ಲಿ ಈ ಸಿನಿಮಾ ಗೊಂದಲ ಮೂಡಿಸುತ್ತದೆ. ಎರಡನೇ ಬಾರಿ ನೋಡಿದರೆ ಮಾತ್ರ ಗ್ರಹಿಕೆಗೆ ಸಿಗುವಂತಹ ನಿರೂಪಣೆ ಈ ಚಿತ್ರದಲ್ಲಿದೆ.
ಚುರುಕಾಗಿ, ಚುಟುಕಾಗಿ
‘ತತ್ಸಮ ತದ್ಭವ’ ಸಿನಿಮಾದ ಅವಧಿ ಕೇವಲ 2 ಗಂಟೆ 2 ನಿಮಿಷ ಮಾತ್ರ ಇದೆ. ಅಷ್ಟರೊಳಗೆ ಹೇಳಬೇಕಾದ ಕಥೆಯನ್ನು ಬಹಳ ಚುರುಕಾಗಿ, ಚುಟುಕಾಗಿ ಹೇಳಿ ಮುಗಿಸಲಾಗಿದೆ. ಹಾಗಾಗಿ ಈ ಸಿನಿಮಾ ಎಲ್ಲಿಯೂ ಬೋರು ಹೊಡೆಯುವುದಿಲ್ಲ. ಆರಂಭದಲ್ಲಿ ಕಥೆ ತೆರೆದುಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಇಂಟರ್ವಲ್ ಬಳಿಕ ಚಿತ್ರದ ವೇಗ ಹೆಚ್ಚುತ್ತದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ಹಿನ್ನೆಲೆ ಸಂಗೀತದಲ್ಲಿ ಹಾಗೂ ‘ದೂರಿ ಲಾಲಿ..’ ಹಾಡಿನಲ್ಲಿ ಇಷ್ಟವಾಗುತ್ತಾರೆ.
ಚಿತ್ರ:ಅನ್ವಿತ್ ಸಿನಿಮಾಸ್.
ನಿರ್ದೇಶನ: ವಿಶಾಲ್ ಆತ್ರೇಯ.
ಪಾತ್ರವರ್ಗ: ಮೇಘನಾ ರಾಜ್, ಪ್ರಜ್ವಲ್ ದೇವರಾಜ್, ಅರವಿಂದ್ ಅಯ್ಯರ್, ಮಹತಿ ವೈಷ್ಣವಿ ಭಟ್, ಶ್ರುತಿ, ಟಿಎಸ್ ನಾಗಾಭರಣ, ಗಿರಿಜಾ ಲೋಕೇಶ್, ರಾಜಶ್ರೀ ಪೊನ್ನಪ್ಪ ಮುಂತಾದವರು.
ಸ್ಟಾರ್: 3/5
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…