ಇಡೀ ವಿಶ್ವವನ್ನು ಕೊವಿಡ್-19 ತಲ್ಲಣಗೊಳಿಸಿದ ನಂತರ ಅನೇಕ ಹೊಸ ರೀತಿಯ ವೈರಸ್ಗಳು ಕಾಣಿಸಿಕೊಳ್ಳತೊಡಗಿವೆ. ಪ್ರತಿದಿನವು ಹೊಸ ವೈರಸ್, ಕೆಲವು ಹೊಸ ರೂಪಾಂತರಿ ಅಥವಾ ಹೊಸ ಅಪರೂಪದ ಆರೋಗ್ಯ ಕಾಯಿಲೆಗಳು ಗೋಚರವಾಗುತ್ತಿವೆ. ಇದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕೊವಿಡ್-19, ಡೆಂಗ್ಯೂ ನಂತರ ಈಗ ಭಾರತದಲ್ಲಿ ಚಿಕನ್ಪಾಕ್ಸ್ನ ಹೊಸ ತಳಿ ಪತ್ತೆಯಾಗಿದೆ. ಇದಕ್ಕೆ ಕ್ಲಾಡ್-9 ಎಂದು ಹೆಸರಿಡಲಾಗಿದೆ.
ಈ ಹೊಸ ಚಿಕನ್ಪಾಕ್ಸ್ನ ತಳಿ ಜರ್ಮನಿ, ಅಮೆರಿಕಾ, ಇಂಗ್ಲೆಂಡ್ಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಭಾರತದಲ್ಲಿ ಚಿಕನ್ಪಾಕ್ಸ್ಗೆ ಕಾರಣವಾಗುವ ವರಿಸೆಲ್ಲಾ-ಜೋಸ್ಟರ್ ವೈರಸ್ನ ಇರುವಿಕೆಯನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್ಐವಿ) ಕಂಡುಹಿಡಿದಿರುವುದು ಇದೇ ಮೊದಲು. ವರಿಸೆಲ್ಲಾ ವೈರಸ್ 9 ಹರ್ಪಿಸ್ ವೈರಸ್ ತಳಿಗಳಲ್ಲಿ ಒಂದಾಗಿದೆ. ಇದು ಮಕ್ಕಳು, ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಚಿಕನ್ಪಾಕ್ಸ್ಗೆ ಕಾರಣವಾಗುತ್ತದೆ.
ಕ್ಲಾಡ್ 9 ಹೊಸ ಚಿಕನ್ಪಾಕ್ಸ್ ವೈರಸ್ನ ತಳಿಯ ರೋಗಲಕ್ಷಣಗಳು:
– ಸಣ್ಣ ಕಜ್ಜಿಗಳು
– ವಿಪರೀತ ಜ್ವರ
– ಹಸಿವಾಗದಿರುವುದು
– ತಲೆನೋವು
– ಆಯಾಸ
ಜ್ವರ ಮತ್ತು ದದ್ದುಗಳು ವೈರಸ್ನ ಕೆಲವು ಮೊದಲ ಲಕ್ಷಣಗಳಾಗಿವೆ. ದೇಹದ ಮೇಲೆ ದದ್ದುಗಳು ಚಿಕನ್ಪಾಕ್ಸ್ನ ಸಾಮಾನ್ಯ ಲಕ್ಷಣವಾಗಿದೆ. ಇದು ಕೆಲವೊಮ್ಮೆ ನೋವಿನಿಂದ ಕೂಡಿರುತ್ತದೆ. ವ್ಯಕ್ತಿಯಲ್ಲಿ ಈ ವೈರಸ್ ಕಾಣಿಸಿಕೊಂಡ 2-3 ವಾರಗಳ ನಂತರ ಈ ದದ್ದುಗಳು ಬೆಳೆಯುತ್ತವೆ. ಇದಕ್ಕೂ ಮೊದಲು ಜ್ವರ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.
ತಡೆಗಟ್ಟುವಿಕೆ ಹೇಗೆ?
ಸರಿಯಾಗಿ ಮತ್ತು ಆಗಾಗ ಕೈಗಳನ್ನು ತೊಳೆದುಕೊಳ್ಳುವುದು, ಅದರಲ್ಲೂ ಕೆಮ್ಮು ಅಥವಾ ಸೀನಿನ ನಂತರ ಕೈ ತೊಳೆದುಕೊಳ್ಳುವುದು, ಚಿಕನ್ಪಾಕ್ಸ್ ಬಂದವರಿಂದ ದೂರ ಇರುವುದು, ಸೋಂಕಿತರು ಬಳಸಿದ ಟವೆಲ್, ಬಟ್ಟೆ ಇತ್ಯಾದಿ ಉತ್ಪನ್ನಗಳನ್ನು ಬಳಸದಿರುವುದು, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದರ ಮೂಲಕ ಚಿಕನ್ಪಾಕ್ಸ್ ಹೊಸ ತಳಿಯನ್ನು ತಡೆಗಟ್ಟಬಹುದು.
ವಿಶೇಷವಾಗಿ ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚು.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…