ಆರೋಗ್ಯ

ಭಾರತದಲ್ಲಿ ಚಿಕನ್​ಪಾಕ್ಸ್​ನ ಹೊಸ ತಳಿ ಪತ್ತೆ; ಏನಿದರ ಲಕ್ಷಣ, ನಿಯಂತ್ರಣ ಹೇಗೆ?

ಇಡೀ ವಿಶ್ವವನ್ನು ಕೊವಿಡ್-19 ತಲ್ಲಣಗೊಳಿಸಿದ ನಂತರ ಅನೇಕ ಹೊಸ ರೀತಿಯ ವೈರಸ್​​ಗಳು ಕಾಣಿಸಿಕೊಳ್ಳತೊಡಗಿವೆ. ಪ್ರತಿದಿನವು ಹೊಸ ವೈರಸ್, ಕೆಲವು ಹೊಸ ರೂಪಾಂತರಿ ಅಥವಾ ಹೊಸ ಅಪರೂಪದ ಆರೋಗ್ಯ ಕಾಯಿಲೆಗಳು ಗೋಚರವಾಗುತ್ತಿವೆ. ಇದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕೊವಿಡ್-19, ಡೆಂಗ್ಯೂ ನಂತರ ಈಗ ಭಾರತದಲ್ಲಿ ಚಿಕನ್​ಪಾಕ್ಸ್​ನ ಹೊಸ ತಳಿ ಪತ್ತೆಯಾಗಿದೆ. ಇದಕ್ಕೆ ಕ್ಲಾಡ್-9 ಎಂದು ಹೆಸರಿಡಲಾಗಿದೆ.

Advertisement
Advertisement
Advertisement

ಈ ಹೊಸ ಚಿಕನ್​ಪಾಕ್ಸ್​ನ ತಳಿ ಜರ್ಮನಿ, ಅಮೆರಿಕಾ, ಇಂಗ್ಲೆಂಡ್​​ಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಭಾರತದಲ್ಲಿ ಚಿಕನ್​ಪಾಕ್ಸ್​ಗೆ ಕಾರಣವಾಗುವ ವರಿಸೆಲ್ಲಾ-ಜೋಸ್ಟರ್ ವೈರಸ್​ನ ಇರುವಿಕೆಯನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಕಂಡುಹಿಡಿದಿರುವುದು ಇದೇ ಮೊದಲು. ವರಿಸೆಲ್ಲಾ ವೈರಸ್ 9 ಹರ್ಪಿಸ್ ವೈರಸ್ ತಳಿಗಳಲ್ಲಿ ಒಂದಾಗಿದೆ. ಇದು ಮಕ್ಕಳು, ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಚಿಕನ್​ಪಾಕ್ಸ್​ಗೆ ಕಾರಣವಾಗುತ್ತದೆ.

ಕ್ಲಾಡ್ 9 ಹೊಸ ಚಿಕನ್ಪಾಕ್ಸ್ ವೈರಸ್​ನ ತಳಿಯ ರೋಗಲಕ್ಷಣಗಳು:

– ಸಣ್ಣ ಕಜ್ಜಿಗಳು

– ವಿಪರೀತ ಜ್ವರ

– ಹಸಿವಾಗದಿರುವುದು

– ತಲೆನೋವು

– ಆಯಾಸ

ಜ್ವರ ಮತ್ತು ದದ್ದುಗಳು ವೈರಸ್‌ನ ಕೆಲವು ಮೊದಲ ಲಕ್ಷಣಗಳಾಗಿವೆ. ದೇಹದ ಮೇಲೆ ದದ್ದುಗಳು ಚಿಕನ್ಪಾಕ್ಸ್​ನ ಸಾಮಾನ್ಯ ಲಕ್ಷಣವಾಗಿದೆ. ಇದು ಕೆಲವೊಮ್ಮೆ ನೋವಿನಿಂದ ಕೂಡಿರುತ್ತದೆ. ವ್ಯಕ್ತಿಯಲ್ಲಿ ಈ ವೈರಸ್‌ ಕಾಣಿಸಿಕೊಂಡ 2-3 ವಾರಗಳ ನಂತರ ಈ ದದ್ದುಗಳು ಬೆಳೆಯುತ್ತವೆ. ಇದಕ್ಕೂ ಮೊದಲು ಜ್ವರ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ತಡೆಗಟ್ಟುವಿಕೆ ಹೇಗೆ?

ಸರಿಯಾಗಿ ಮತ್ತು ಆಗಾಗ ಕೈಗಳನ್ನು ತೊಳೆದುಕೊಳ್ಳುವುದು, ಅದರಲ್ಲೂ ಕೆಮ್ಮು ಅಥವಾ ಸೀನಿನ ನಂತರ ಕೈ ತೊಳೆದುಕೊಳ್ಳುವುದು, ಚಿಕನ್​ಪಾಕ್ಸ್ ಬಂದವರಿಂದ ದೂರ ಇರುವುದು, ಸೋಂಕಿತರು ಬಳಸಿದ ಟವೆಲ್, ಬಟ್ಟೆ ಇತ್ಯಾದಿ ಉತ್ಪನ್ನಗಳನ್ನು ಬಳಸದಿರುವುದು, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದರ ಮೂಲಕ ಚಿಕನ್​ಪಾಕ್ಸ್​ ಹೊಸ ತಳಿಯನ್ನು ತಡೆಗಟ್ಟಬಹುದು.

ವಿಶೇಷವಾಗಿ ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚು.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago